ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತ್ನಿ ಕೊಲೆಗೈದ ಪತಿ | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲೇ ಪತಿ, ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗ ಬಂದಿದೆ. ಕನ್ನಡದ ಸೂಪರ್ ಹಿಟ್ ಚಿತ್ರ ಬಾ ನಲ್ಲೆ ಮಧುಚಂದ್ರಕೆ ಚಿತ್ರದಂತೆ ಈ ಕೃತ್ಯ ಎಸಗಲಾಗಿದೆ.
ಜ್ಯೋತಿ ಹಾಗೂ ಆರೋಪಿ ಪೃಥ್ವಿರಾಜ್ ಬಿಹಾರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ನವೆಂಬರ್ನಲ್ಲಿ ಬಿಕಾಂ ಪದವೀಧರೆಯಾಗಿದ್ದ ಜ್ಯೋತಿಯೊಂದಿಗೆ ವಿವಾಹವಾಗಿದ್ದಾನೆ. ಪತ್ನಿಯು ಯುಪಿಎಸ್ಸಿ ಪರೀಕ್ಷೆ ಬರೆದಿದ್ದಳು. ಆ ವೇಳೆ ಆಕೆಗೆ ಯುವಕನೋರ್ವನ ಪರಿಚಯವಾಗಿ ಇಬ್ಬರು ಚಾಟ್ ಮಾಡಲು ಶುರು ಮಾಡಿದ್ದಾರಂತೆ. ಇದರಿಂದ ಇಬ್ಬರಿಗೂ ಒಂದಿಲ್ಲೊಂದು ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಪತಿ ಪತ್ನಿಯನ್ನು ಹತ್ಯೆ ಮಾಡಲು ಪ್ಲಾನ್ ಮಾಡಿ ಆಗಸ್ಟ್ 2 ರಂದು ಪತ್ನಿಯನ್ನು ಟ್ರಿಪ್ಗೆ ಕರೆದೊಯ್ಯಲು ಜೂಮ್ ಕಾರ್ ಬುಕ್ ಮಾಡಿದ್ದ.
ಉಡುಪಿಯ ಮಲ್ಪೆ ಬೀಚ್ ಗೆ ಆಗಸ್ಟ್ 2 ರಂದು ಹೋಗಿದ್ದ ವೇಳೆ ಸುಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಿ ನ್ಯಾಚುರಲ್ ಡೆತ್ ಅಂತ ಮಾಡ್ಬೇಕು ಯೋಚನೆ ಮಾಡಿದ್ದ. ಆದರೆ ಸಮದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಆತನ ಸ್ಕೆಚ್ ಫ್ಲಾಫ್ ಆಗಿತ್ತು ಎನ್ನಲಾಗಿದೆ.
ಮತ್ತೊಮ್ಮೆ ಸಕಲೇಶಪುರದ ಗುಂಡ್ಯಾ ಬಳಿ ಪತ್ನಿಯನ್ನ ಕರೆತಂದಿದ್ದ ಪೃಥ್ವಿರಾಜ್, ಜ್ಯೋತಿಯದ್ದೇ ವೇಲ್ನಿಂದ ಆಕೆಯ ಉಸಿರುಗಟ್ಟಿಸಿ ಕೊಲೆಗೈದಿದ್ದ. ಬಳಿಕ ಪತ್ನಿಯ ಮೃತದೇಹವನ್ನು ಪೊದೆಯೊಂದರಲ್ಲಿ ಎಸೆದು ಬೆಂಗಳೂರಿಗೆ ವಾಪಸ್ ಆಗಿದ್ದ.
ನಂತರ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇದೆ ಎಂಬ ವಿಷಯ ಬಾಯ್ಬಿಟ್ಟಿದ್ದ. ಸಂಶಯಗೊಂಡ ಪೊಲೀಸರು ಸಿಸಿಟಿವಿ, ಸಿಡಿಆರ್ ಪರಿಶೀಲನೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.