ಪ್ರೀತಿ ನಿರಾಕರಿಸಿದ ಯುವತಿಗೆ ಕಾರು ಗುದ್ದಿ ಕೊಲೆ | JANATA NEWS
ಹಾಸನ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕಾರು ಗುದ್ದಿಸಿ ಹತ್ಯೆಗೈದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ
ಆಗಸ್ಟ್ 03ರಂದು ಹಾಸನದ ಹೊರವಲಯದ ಭುವನಹಳ್ಳಿ ಬಳಿ ಇರುವ ಸರ್ಕಲ್ ಹತ್ತಿರ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಯುವತಿ ಶರಣ್ಯಳಿಗೆ ಆಲ್ಟೋ ಕಾರೊಂದು ಗುದ್ದಿದ್ದು, ಬಳಿಕ ಹಾಲಿನ ವಾಹನ, ಗೂಡ್ಸ್ ಆಟೋ ಸೇರಿದಂತೆ 2 ಬೈಕ್ ಹಾಗೂ ಸಾರಿಗೆ ಬಸ್ಗೂ ಡಿಕ್ಕಿ ಹೊಡೆದಿತ್ತು. ಈ ಕಾರಿನಲ್ಲಿ ಬಂದಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸಾರ್ವಜನಿಕರು ಓಡಿ ಬಂದು ಹಿಡಿಯುವಷ್ಟರಲ್ಲಿ ಆತ ಅಲ್ಲಿಂದ ಓಡಿ ಹೋಗಿದ್ದ.
ಅಪಘಾತಕ್ಕೆ ಒಳಗಾದ ಯುವತಿಯ ಹೆಸರು ಶರಣ್ಯ. ಅಮಾನುಷವಾಗಿ ಡಿಕ್ಕಿ ಹೊಡೆದು ಓಡಿ ಹೋದವನ ಹೆಸರು ಭರತ್.
ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿ ಗ್ರಾಮದ ಶರಣ್ಯ ಎಂಬ ಯುವತಿ ಬೂವನಹಳ್ಳಿಯಲ್ಲಿರುವ ಭಾರತಿ ಅಸೋಸಿಯೇಟ್ಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಬೊಮ್ಮನಾಯಕನಹಳ್ಳಿ ಗ್ರಾಮದ ಭರತ್ ಜಿ.ಆರ್ ಶರಣ್ಯಳ ಹಿಂದೆ ಬಿದ್ದಿದ್ದ. ನನ್ನ ಪ್ರೀತಿಯನ್ನು ಒಪ್ಪಿಕೋ ಎಂದು ಪದೇ ಪದೇ ಪೀಡಿಸುತ್ತಿದ್ದು, ಇದಕ್ಕೆ ಶರಣ್ಯ ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಭರತ್, ಮೈಸೂರಿನಿಂದ ಬಾಡಿಗೆ ಕಾರೊಂದನ್ನು ಪಡೆದು ಬಂದು ಈ ಕೃತ್ಯ ಎಸಗಿದ್ದಾನೆ.
ಈ ಸಂಬಂಧ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ