ಸಿನಿಮಾ ನೋಡಿ ಬರುವಾಗ ಭೀಕರ ಅಪಘಾತ: ನವ ವಿವಾಹಿತೆ ಸಾವು, ಪತಿ ಸ್ಥಿತಿ ಗಂಭೀರ | JANATA NEWS
ಬೆಂಗಳೂರು : ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಕಲ್ಯಾಣ ನಗರದ ಜಂಕ್ಷನ್ ಬಳಿ ನಡೆದಿದೆ.
ಶ್ವೇತಾ (23) ಮೃತಪಟ್ಟ ಮಹಿಳೆ. ಪತಿ ಆನಂದ್ (28) ಸ್ಥಿತಿ ತೀರ ಗಂಭೀರವಾಗಿದೆ. ರಾಮಮೂರ್ತಿನಗರದಿಂದ ಹೆಬ್ಬಾಳದಲ್ಲಿರುವ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ಈ ದಂಪತಿ ಸಿನಿಮಾ ನೋಡಿಕೊಂಡು ಮನೆಗೆ ವಾಪಾಸ್ ಆಗುವಾಗ ರಿಂಗ್ ರೋಡ್ನ ಹೆಣ್ಣೂರು ಅಂಡರ್ ಪಾಸ್ ಬಳಿ ಆನಂದ್(28) ಹಾಗೂ ಪತ್ನಿ ಶ್ವೇತಾ(23) ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ವೇಗವಾಗಿ ಬಂದು ಸ್ಕೂಟರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ.
ಈ ಘಟನೆಯಲ್ಲಿ ಶ್ವೇತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತಿಗೆ ಗಂಭೀರ ಗಾಯಗಳಾಗಿವೆ. ಘಟನೆಗೆ ಕಾರಣರಾದ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಪಘಾತವೆಸಗಿ ಪರಾರಿಯಾಗಿರುವ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ