ವಿದ್ಯಾರ್ಥಿಗೆ ಬಿಸಿ ನೀರು ಎರಚಿದ ಶಿಕ್ಷಕ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಶಿಕ್ಷಣ ಇಲಾಖೆಗೆ ನೋಟಿಸ್ | JANATA NEWS
ರಾಯಚೂರು : ಶಾಲಾ ಬಾಲಕನ ಮೇಲೆ ಶಿಕ್ಷಕನೊಬ್ಬ ಬಿಸಿ ನೀರು ಎರಚಿರೊ ಆರೋಪ ಪ್ರಕರಣ ಇತ್ತೀಚೆಗೆ ಭಾರೀ ಸಂಚಲಕ್ಕೆ ಕಾರಣವಾಗಿದೆ.
ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕಲ್ಲೂರಿನ ಘನಮಠೇಶ್ವರ ಶಾಲೆಯ ವಿದ್ಯಾರ್ಥಿಯ ಮೇಲೆ ಬಿಸಿನೀರು ಸುರಿದ ಆರೋಪ ಪ್ರಕರಣ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ದೂರು ನೀಡಿದ್ದಾರೆ.
ಘಟನೆ ಬಳಿಕ ಶಿಕ್ಷಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಶಿಕ್ಷಣ ಇಲಾಖೆಗೆ ನೋಟಿಸ್ ನೀಡಲಾಗಿದ್ದು, 1 ವಾರದೊಗಳೆಗೆ ಘಟನೆ ಸಂಬಂಧ ವರದಿ ಸಲ್ಲಿಸಬೇಕು. ಈ ಘಟನೆಗೆ ಕಾರಣವಾಗಿರುವಂತ ಶಿಕ್ಷಕ ಹುಲಿಗೆಪ್ಪನನ್ನು ಬಂಧಿಸಬೇಕು ಎಂಬುದಾಗಿ ಸೂಚಿಸಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿರುವಂತ ಶಅರೀ ಘನಮಠೇಶ್ವರ ಶಾಲೆಯಲ್ಲಿ ಶಿಕ್ಷಕ ಹುಲಿಗೆಪ್ಪ ಎಂಬಾತ, ಸಪ್ಟೆಂಬರ್ 2 ರಂದು ಘಟನೆ ನಡೆದಿದ್ದು, ಬಾಲಕ ಸಮವಸ್ತ್ರದಲ್ಲಿ ಮಲ ವಿಸರ್ಜನೆ ಮಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕರೊಬ್ಬರು ಆತನಿಗೆ ಬಿಸಿ ನೀರು ಎರಚಿದ್ದಾರೆ
ಎಫ್ಐಆರ್ ದಾಖಲಾಗ್ತಿದ್ದಂತೆಯೇ, ಮಸ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿ ನೇತೃತ್ವದಲ್ಲಿ ಇಂದು ಸ್ಥಳ ಮಹಜರು ನಡೆಸಲಾಗಿದೆ.
ಸದ್ಯ ಗಾಯಾಳು ವಿದ್ಯಾರ್ಥಿ ಲಿಂಗಸೂಗೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕತ್ತು, ಮುಖ, ತೊಡೆಭಾಗಕ್ಕೆ ಗಂಭೀರ ಗಾಯಗಳಾಗಿವೆ. ಇದರಿಂದ ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ನರಳಾಡುತ್ತಿದ್ದಾನೆ.