ಉಗ್ರರ ಜತೆ ಸಂಪರ್ಕ, ಕೊಪ್ಪಳದಲ್ಲಿ ಓರ್ವ ಅರೆಸ್ಟ್ | JANATA NEWS
ಕೊಪ್ಪಳ : ನಿಷೇಧಿತ ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ ಆರೋಪದ ಮೇರೆಗೆ ಗಂಗಾವತಿಯಲ್ಲಿ ವ್ಯಕ್ತಿಯೋರ್ವನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಎಸ್ಐಎಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ವ್ಯಕ್ತಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಶಿವಮೊಗ್ಗದ ಬಂಧನವಾಗಿರುವ ಐಎಸ್ಐಎಸ್ ಸಂಘಟನೆಯ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬಂಧನ ಮಾಡಲಾಗಿದೆ. ಶಿವಮೊಗ್ಗ ಸೇರಿದಂತೆ ಹಲವಡೆ ಈತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮೈಬೂಬ್ ನಗರದ ನಿವಾಸಿ, ಗಂಗಾವತಿ ನಗರದ ಬನ್ನಿಗಿಡದ ಕ್ಯಾಂಪ್ನ ಬಾಳೆ ಹಣ್ಣು ವ್ಯಾಪಾರಿ ಶಬ್ಬೀರ್ ಎನ್ನುವ ವ್ಯಕ್ತಿ ಬಂಧಿತ ವ್ಯಕ್ತಿ. ಬಿಕಾಂ ಪದವಿಧರನಾಗಿರುವ ಈ ಶಬ್ಬೀರ್ ಬಾಳೆ ಹಣ್ಣಿನ ಹೊಲಸೇಲ್ ವ್ಯಾಪಾರಿಯಾಗಿದ್ದಾನೆ.
ತಡರಾತ್ರಿ ಹಣ್ಣಿನ ಅಂಗಡಿಯ ಮೇಲೆ ಏಕಾಏಕಿ ದಾಳಿ ನಡೆಸಿ ಶಬ್ಬೀರ್ ನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.