ರೀಶಬ ಶೆಟ್ಟಿ ರವರ ಕಾಂತಾರ ಚಲನಚಿತ್ರ ವೀಕ್ಷಿಸಿದ ಬಿಜೆಪಿ ಮುಖಂಡರು, ಸಚಿವರು | JANATA NEWS
ಬೆಂಗಳೂರು : ಬಿಜೆಪಿ ಮುಖಂಡರ ತಂಡ ನಿನ್ನೆ ರವಿವಾರ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ರಾಜ್ಯ ಕರಾವಳಿ ಪರಂಪರೆ, ಸೊಗಡಿನ ಕನ್ನಡದ "ಕಾಂತಾರ" ಚಲನಚಿತ್ರವನ್ನು ವೀಕ್ಷಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಸಚಿವರುಗಳಾದ ಆರ್.ಅಶೋಕ, ಡಾ.ಅಶ್ವತ್ ನಾರಾಯಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಕುಟುಂಬ ಈ ಚಿತ್ರ ವೀಕ್ಷಿಸಿದೆ.
ತುಳು ನಾಡಿನ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಸಾರಿ ತೋರಿಸಿದ ನಟ ಮತ್ತು ನಿರ್ದೇಶಕ ಶ್ರೀ ರೀಶಬ ಶೆಟ್ಟಿ ರವರ "ಕಾಂತಾರ" ಚಲನಚಿತ್ರವನ್ನು ಇಂದು ರಾಜ್ಯಾಧ್ಯಕ್ಷರಾದ ಶ್ರೀ ನಳಿನ ಕುಮಾರ್ ಕಟೀಲ್, ಸಚಿವರುಗಳಾದ ಶ್ರೀ ಆರ್.ಅಶೋಕa, ಶ್ರೀ ಡಾ.ಅಶ್ವತ್ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದರಾಜು ಹಾಗೂ ನನ್ನ ಕುಟುಂಬದೊಂದಿಗೆ ವೀಕ್ಷಿಸಿದೆನು.
ತುಳು ನಾಡಿನ ಆಚರಣೆಗಳಾದ ಕಂಬಳ, ಕೋಲಾ, ಭೂತಾರಾಧನೆ, ದೈವಾರಾಧನೆ ಮತ್ತು ಇಲ್ಲಿನ ಆಚಾರ-ವಿಚಾರಗಳನ್ನು ಅತ್ಯದ್ಭುತವಾಗಿ ಬಿಂಬಿಸಿದ ಚಿತ್ರತಂಡಕ್ಕೆ ಶುಭಕೋರುತ್ತೇನೆ, ಎಂದು ಸದಾನಂದ ಗೌಡ ಹೇಳಿದ್ದಾರೆ.