ಕ್ರಿಶ್ಚಿಯನ್ನಿಂದ ಮತಾಂತರ ಆಗುತ್ತೆ ಅಂತ ಭಾವಿಸಿದ್ದೆವು, ಮುಸ್ಲಿಂ ಮತಾಂತರ ಆಗಿದೆ: ಸಚಿವ ಆರ್.ಅಶೋಕ್ | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ ಎಂದು ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಬೆಳಕಿಗೆ ಬಂದ ಮೊದಲ ಪ್ರಕರಣ ಕುರಿತು ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಡ್ಯದ ಹಿಂದೂ ವ್ಯಕ್ತಿಯ ಅಕೌಂಟಿಗೆ ಹಣ ನೀಡಿ ಮತಾಂತರ ಮಾಡಲಾಗಿದೆ. ಅಷ್ಟೇ ಅಲ್ಲದೆ ಬೇರೆ ಕಡೆ ಕರೆದುಕೊಂಡು ಹೋಗಿ ಶಿವ, ಬನಶಂಕರಿ ಎಲ್ಲ ದೇವರು ಒಳ್ಳೆಯವರಲ್ಲ ಅಂತ ಹೇಳಿದ್ದಾರೆ. ಮುಸ್ಲಿಂಗೆ ಮತಾಂತರ ಆದರೆ, ದೇವರು ಮನೆಯಲ್ಲೇ ಪ್ರತ್ಯಕ್ಷ ಆಗ್ತಾರೆ ಅಂತ ಪ್ರಚೋದನೆ ನೀಡಿದ್ದಾರೆ.
ಮೂರು ಜನರಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟಿದ್ದಾರೆ. ಅಲ್ಲದೆ ದನದ ಮಾಂಸ ತಿನ್ನಲು ಬಲವಂತ ಮಾಡಿದ್ದಾರೆ, ತಿನ್ನಲ್ಲ ಅಂದಿದ್ದಕ್ಕೆ ಟಾರ್ಚರ್ ಮಾಡಿದ್ದಾರೆ. ಬನಶಂಕರಿಯಲ್ಲಿರೋ ಕಬರ್ಸ್ತಾನ್ಗೆ ಕರೆದೊಯ್ದು ಟಾರ್ಚರ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧನ ಆಗಿರೋದು ಕಾಂಗ್ರೆಸ್ ಕಾರ್ಪೊರೇಟರ್, ಎರಡು ಬಾರಿ ಕಾರ್ಪೊರೇಟರ್ ಆಗಿದ್ದರು. ಪೊಲೀಸರು ಮೂವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ ಎಂದರು.