ಹಲಾಲ್ ಕಟ್ಟೋ. ಹಲ್ಕಟ್ಟೋ.. ಒಂದು ಅರ್ಥ ಆಗುತ್ತಿಲ್ಲ | JANATA NEWS
ಶಿವಮೊಗ್ಗ : ಹಲಾಲ್ ಕಟ್ಟೋ… ಹಲ್ಕಟ್ಟೋ.. ನನಗಂತೂ ಒಂದು ಅರ್ಥ ಆಗುತ್ತಿಲ್ಲ ಎಂದು ರಾಜ್ಯದಲ್ಲಿ ಹಲಾಲ್ ಕಟ್ ವಿರೋಧಿ ಆಂದೋಲನ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಹಲಾಲ್ ಕಟ್ ವಿರೋಧಿ ಆಂದೋಲನ ವಿಚಾರವಾಗಿ ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಅವರು ಅವರ ದೇವರಿಗೆ ಎಡೆ ಇಡ್ತಾರೆ. ಹಲಾಲ್ ಕಟ್ ಮಾಡಿ ಎಡೆ ಇಡ್ತಾರಂತೆ! ನಾವು ನಮ್ಮ ದೇವರಿಗೆ ಇಡುತ್ತೇವೆ. ಅವರು ಎಡೆ ಇಟ್ಟಿದನ್ನ ತಗೊಂಡು ನಮ್ಮ ದೇವರಿಗೆ ಇಡಬೇಕಂತೆ. ನಮಗೇನು ಗ್ರಹಚಾರನಾ? ಸ್ಪಷ್ಟವಾಗಿ ಹೇಳ್ತೇನೆ.. ನಾನು ಹಲಾಲ್ ಕಟ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ ಎಂದರು.
ಕೊಲೆ, ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಾದ ನಂತರ ಇದೆಲ್ಲಾ ಆರಂಭವಾಗಿದೆ. ಯಾವಾಗ ವಾಪಸ್ ಒದೆ ಬೀಳಲು ಆರಂಭವಾಯ್ತೋ ಅಂದಿನಿಂದ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದಾರೆ. ಈ ಹಿಂದೆ ಯುಗಾದಿ ಸಂದರ್ಭದಲ್ಲಿ ಹಲಾಲ್ ಕಟ್ ಬಗ್ಗೆ ಮಾತನಾಡಿದ್ರು ಆದ್ರೇ, ಈ ಬಾರಿ ಒಬ್ಬರೂ ಸಹ ಮಾತನಾಡ್ತಿಲ್ಲ ಎಂದು ಹೇಳಿದರು.
ಸ್ವಾಭಾವಿಕವಾಗಿ ಹಿಂದೂ ಸಮಾಜ ಎದ್ದು, ಜಾಗೃತವಾಗಿದೆ. ಅವರಿಗೆ ಸಿಗುವ ಲಾಭ, ಹಣವನ್ನು ದೇಶದ್ರೋಹಿ ಚಟುವಟಿಕೆಗೆ ಬಳಸುತ್ತಾರೆ. ಬಾಂಬ್ ತಯಾರಿಸಲು, ಭಯೋತ್ಪಾದನಾ ಕೃತ್ಯಕ್ಕೆ ಹಣ ಬಳಸ್ತಾರೆ. ನಮ್ ದುಡ್ಡಲ್ಲಿ ಲಾಭ ಮಾಡ್ಸಿ, ನಾವೇ ಬಾಂಬ್ ಹಾಕ್ಸೋಬೇಕಾ ಎಂದು ಪ್ರಶ್ನಿಸಿದರು.
ದಿನೇ ದಿನೇ ಜಾಗೃತಿಯಾಗುತ್ತಲೇ ಇದೆ. ನಾನಂತೂ ಜೀವನದಲ್ಲಿ ಹಲಾಲ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ. ನಾನು ಯಾವುದೇ ಮುಸಲ್ಮಾನರ ಮನೆಯಲ್ಲಿ ತಿಂದಿಲ್ಲ. ಯಾವುದೇ ಮುಸಲ್ಮಾನರ ಮನೆಗೆ ಹೋಗಿ ಹಲಾಲ್ ಕಟ್ ಅಗಿರೋದಕ್ಕೆ ತಿನ್ನುತ್ತಿದ್ದೆವೆ ಎಂದು ಅವರು ಸ್ಪಷ್ಟವಾಗಿ ಹೇಳ್ತಾರೆ. ಯಾವುದೇ ಮುಸಲ್ಮಾನರ ಮನೆಗೆ ಹೋಗೋಕೆ ನಾನಂತೂ ಇಷ್ಟಪಡಲ್ಲ ಎಂದರು.