ದೀಪಾವಳಿಯ ಮೊದಲ ದಿನವೇ ಪಟಾಕಿಯಿಂದ 11 ಜನ ಗಾಯ | JANATA NEWS
ಬೆಂಗಳೂರು : ದೀಪಾವಳಿಯ ಮೊದಲ ದಿನವೇ ಪಟಾಕಿಯಿಂದ 11 ಜನ ಗಾಯಗೊಂಡಿದ್ದಾರೆ. ಪಟಾಕಿ ಸಿಡಿತಕ್ಕೆ ಮಿಂಟೋ ಆಸ್ಪತ್ರೆ ಒಂದರಲ್ಲೇ 11 ಕೇಸ್ ದಾಖಲಾಗಿದೆ.
ಪಟಾಕಿ ಸಿಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಇದೇ 22 ರಿಂದ ಇಲ್ಲಿವರೆಗೆ 11 ಪಟಾಕಿ ಅವಘಡಗಳ ಕೇಸ್ ದಾಖಲಾಗಿವೆ.
ಚಾಮರಾಜಪೇಟೆಯ 10 ವರ್ಷದ ಬಾಲಕ ಆಜಾದ್, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ ಸಂಗೀತ ವರ್ಮಾ 49 ವರ್ಷ, ಅವೆನ್ಯೂ ರಸ್ತೆಯ 22 ವರ್ಷದ ಅಬೀಬುಲ್ಲ ಸೇರಿ ಒಟ್ಟು 11 ಜನರಿಗೆ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಜೆಪಿನಗರದ 10 ವರ್ಷದ ಬಾಲಕ ಮನೋಜ್ ಕಣ್ಣಿಗೆ ಪಟಾಕಿ ಸಿಡಿದು ಬಾಲಕನ ಮುಖ ಸುಟ್ಟು ಹೋಗಿದೆ. ಅಲ್ಲದೇ ಆತನ ಕಣ್ಣು ಹಾಗೂ ದೇಹದ ಮೇಲೂ ಸುಟ್ಟ ಗಾಯಗಳಾಗಿದೆ.
ರಾಕೆಟ್ ಸಿಡಿದು ಥಣಿಸಂಧ್ರದ 7 ವರ್ಷದ ಬಾಲಕ ಸ್ಯಾಮುಯೆಲ್ ಬಲ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿದೆ. ಫ್ರೇಜರ್ ಟೌನ್ ಮೂಲದ 7 ವರ್ಷದ ಆದಿತ್ಯ ಎಂಬ ಹುಡುಗ ಕೂಡ ಪಟಾಕಿ ಸಿಡಿದು ಕಣ್ಣಿಗೆ ಪೆಟ್ಟುಆಗಿದೆ.
ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 11 ಪ್ರಕರಣ ವರದಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ಪ್ರಕರಣಗಳು ದಾಖಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ 24/07 ತುರ್ತು ಚಿಕಿತ್ಸೆ ಲಭ್ಯವಿರಲಿದ್ದು, ನೀವು ಸಹಾಯವಾಣಿ 94817 40137, 94808 32430 ನಂಬರ್ಗಳನ್ನು ಸಂಪರ್ಕಿಸಬಹುದಾಗಿದೆ.