ಶಾಲೆಯಿಂದ ವಾಪಸಾಗುತ್ತಿದ್ದ ಮೂವರು ಮಕ್ಕಳ ಅಪಹರಣಕ್ಕೆ ಯತ್ನ, ಸ್ಫೋಟಕ ಮಾಹಿತಿ ಬಯಲು | JANATA NEWS
ತುಮಕೂರು : ಮೂವರು ಮಕ್ಕಳನ್ನು ಅಪರಿಚಿತರು ಅಪಹರಣ ಮಾಡಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳ್ಳಾರ ಮೇಲಿನ ಗೊಲ್ಲರಹಟ್ಟಿಯಲ್ಲಿ ಘಟನೆ.
ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮೂವರು ಮಕ್ಕಳನ್ನು ಕಾರಿನಲ್ಲಿ ಬಂದ ಅಪರಿಚಿತರು, ಅಪಹರಣಕ್ಕೆ ಯತ್ನಿಸಿದ್ದಾರೆ. ಕಾರಿಗೆ ಹತ್ತಿಸುತ್ತಿದ್ದ ವೇಳೆ ಮಕ್ಕಳು ಕಿರುಚಾಡಿದ್ದಾರೆ. ಮಕ್ಕಳ ಕೂಗಾಟದಿಂದ ಭಯಗೊಂಡ ಕಿಡ್ನಾಪರ್ಸ್ ಮಕ್ಕಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ರಶ್ಮಿಕಾ, ಲೋಹಿತ್, ಹರ್ಷಿತಾಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಪರಿಚಿತ ವಾಹನದಲ್ಲಿ ಈಗಾಗಲೇ ಇತರೇ ಮೂವರು ಮಕ್ಕಳನ್ನು ಹಿಡಿದು ಕೈ ಕಾಲು ಕಟ್ಟಿ, ಬಾಯಿ ಮುಚ್ಚಿಸಿ ಕಾರಿನಲ್ಲಿರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಹರಣಕಾರರಿಗಾಗಿ ಶೋಧಕಾರ್ಯ ನಡೆಯುತ್ತಿದೆ.