ಮೊದಲು ಚೆನ್ನಾಗಿಲ್ಲ ಅಂತ ತಿರಸ್ಕರಿಸಿದವಳು ಈಗ ಅವನೇ ಬೇಕೆಂದಳು, ಯುವತಿಯ ಕಿರುಕುಳಕ್ಕೆ ಬೇಸತ್ತ ಯುವಕ ನಾಪತ್ತೆ | JANATA NEWS
ಕಲಬುರಗಿ : ಮೊದಲು ಚೆನ್ನಾಗಿಲ್ಲ ಅಂತ ತಿರಸ್ಕರಿಸಿದವಳು ಈಗ ಅವನೇ ಬೇಕೆಂದ ದುಂಬಾಲು ಬಿದ್ದಿದ್ದಾಳೆ, ಯುವತಿ ಕಾಟಕ್ಕೆ ಬೇಸತ್ತ ಯುವಕ ನಾಪತ್ತೆಯಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮಾರೇಪ್ಪ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಮರೇಪ್ಪ ಬೀದರ್ ಜಿಲ್ಲಾ ಪಂಚಾಯತಿಯಲ್ಲಿ ಕಳೆದ ಒಂದೂವರೇ ವರ್ಷದಿಂದ ನರೇಗಾ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ. ಯುವಕನೊಬ್ಬ ಮದುವೆಯಾಗಲು ಸ್ನೇಹಿತರ ಜೊತೆಗೂಡಿ ಯುವತಿಯನ್ನ ನೋಡಿದ್ದ. ಆದ್ರೆ ಹುಡುಗ ಸರಿ ಇಲ್ಲ ಎಂದು ಯುವತಿ ರಿಜೆಕ್ಟ್ ಮಾಡಿದ್ದಳು.
ಆ ಮೇಲೆ ಯುವಕ ಮತ್ತೊಂದು ಯುವತಿಯನ್ನ ನೋಡಿ ಎಂಗೇಜ್ಮೆಂಟ್ ಆಗಿದ್ದ. ಆದ್ರೆ, ಇದೀಗ ತಿರಸ್ಕರಿಸಿದ್ದ ಯುವತಿ ಮಾರೇಪ್ಪನ ಹಿಂದೆ ಬಿದ್ದಿದ್ದಾಳೆ. ನೀನೇ ಬೇಕು ಅಂತ ದುಂಬಾಲು ಬಿದ್ದಿದ್ದಾಳೆ. ಮಾರೇಪ್ಪ ಮತ್ತೊಂದು ಹುಡುಗಿಯ ಜೊತೆ ಎಂಗೇಜ್ಮೆಂಟ್ ಆಗಿದ್ರೂ ಕೂಡ ನಿನ್ನ ಮದ್ವೆ ಆಗ್ತೇನೆಂದು ದುಂಬಾಲು ಬಿದ್ದಿದ್ದಾಳೆ.
ಹೀಗಾಗಿ ಮನನೊಂದ ಯುವಕ 5 ಪುಟ ಲೇಟರ್ ಬರೆದು, ಫೋನ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.