ಪಾರಿವಾಳ ಹಿಡಿಲು ಹೋಗಿ ವಿದ್ಯುತ್ ಶಾಕ್, ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸಾವು | JANATA NEWS
ಬೆಂಗಳೂರು : ಪಾರಿವಾಳ ಹಿಡಿಯುವಾಗ ಇಬ್ಬರು ಬಾಲಕರಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದ ಸುಪ್ರೀತ್ (12) ಮೃತ ಬಾಲಕ.
ಡಿಸೆಂಬರ್ 1ರಂದು ಸಂಜೆ ವೇಳೆ ಚಂದ್ರು ಮತ್ತು ಸುಪ್ರೀತ್ ಪಾರಿವಾಳ ಹಿಡಿಯಲು ಮನೆ ಮೇಲೆ ಹೋಗಿದ್ದರು. ಈ ವೇಳೆ ಕಬ್ಬಿಣದ ರಾಡ್ನಿಂದ ಪಾರಿವಾಳಕ್ಕೆ ಹೊಡೆಯಲು ಹೋಗಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ತಗುಲಿತ್ತು.
ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಸಾವನ್ನಪ್ಪಿದ್ದಾನೆ.
English summary :A boy died after going to pigeon coop and receiving treatment for electric shock