ಲಾಡ್ಜ್ನಲ್ಲಿ ಅನುಮಾನಾಸ್ಪದ ಸಾವು, ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ | JANATA NEWS
ಮಂಗಳೂರು : ಲಾಡ್ಜ್ ಒಂದರಲ್ಲಿ ವ್ಯಕ್ತಿ ಒಬ್ಬರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ ಆಗಿದೆ.
ಮಂಗಳೂರಿನ ಪಂಪ್ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ನಲ್ಲಿ ಇಂದು ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎನ್ನುವರ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಬ್ದುಲ್ ಕರೀಮ್ ನಿನ್ನೆ ಬೆಳಗ್ಗೆ ಬಂದು ಲಾಡ್ಜ್ ಪಡೆದಿದ್ದರು. ಆದರೆ ಇಂದು ಮಧ್ಯಾಹ್ನ 1.30 ಸುಮಾರಿಗೆ ಕರೀಮ್ ಇದ್ದ ರೂಮ್ಗೆ ಮಹಿಳೆ ಒಬ್ಬರು ಭೇಟಿ ನೀಡಿದ್ದಾರೆ.
ನಂತರ ಮಹಿಳೆ ಮಧ್ಯಾಹ್ನ 2.30 ಕ್ಕೆ ಕರೀಮ್ ರೂಮ್ನಿಂದ ವಾಪಸ್ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೂಮ್ನಲ್ಲಿ ‘Ksheerabala’ ಹೆಸರಿನ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆಯಾಗಿದ್ದು, ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಶಂಶಯ ಎದ್ದಿದೆ.
ಕುಟುಂಬದವರು ಕಂಕನಾಡಿ ಪೊಲೀಸ್ ಠಾಣೆಗೆ ಅನುಮಾನಸ್ಪದ ಸಾವು ಎಂದು ದೂರು ದಾಖಲಿಸಿದ್ದಾರೆ.