ಸೆಕ್ಯೂರಿಟಿ ಗಾರ್ಡ್ನನ್ನು ಕೊಲೆ ಮಾಡಿ ಮನೆ ದೋಚಿ ಎಸ್ಕೇಪ್ ಆದ ದುಷ್ಕರ್ಮಿಗಳು! | JANATA NEWS
ಬೆಂಗಳೂರು : ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ನನ್ನು ಕೊಲೆ ಮಾಡಿ ಮನೆಯನ್ನು ದೋಚಿ ಎಸ್ಕೇಪ್ ಆಗಿರೋ ಘಟನೆ ನಿನ್ನೆ ರಾತ್ರಿ ನಗರದ ಕೋರಮಂಗಲದ 6ನೇ ಬ್ಲಾಕ್ನಲ್ಲಿ ನಡೆದಿದೆ.
ಕೋರಮಂಗಲದ 6ನೇ ಬ್ಲಾಕ್ನಲ್ಲಿರುವ ರಾಜಗೋಪಾಲರೆಡ್ಡಿ ಕುಟುಂಬದವರು ಕಾರ್ಯಕ್ರಮಕ್ಕೆಂದು ಬೇರೆಡೆ ತೆರಳಿದ್ದಾಗ ಕೃತ್ಯ ಎಸಗಲಾಗಿದೆ.
ಮನೆ ಕಾವಲು ಕಾಯುತ್ತ ಸೆಕ್ಯೂರಿಟಿ ಒಬ್ಬರೇ ಇದ್ದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಸೆಕ್ಯೂರಿಟಿಯನ್ನ ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿನ ಮೌಲ್ಯಯುತವಾದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
English summary :The miscreants escaped by killing the security guard and ransacking the house!