ಹೆಂಡತಿ ಮಕ್ಕಳ ಬಿಟ್ಟು, ಪ್ರಿಯತಮೆಗಾಗಿ ನೇಣಿಗೆ ಶರಣಾದ ವಿವಾಹಿತ | JANATA NEWS
ಚಿಕ್ಕಬಳ್ಳಾಪುರ : ಮನೆಯಲ್ಲಿ ಸುಂದರ ಪತ್ನಿಯಿದ್ದು, ಮಕ್ಕಳು ಇದ್ದರೂ ಆದರೂ ಪ್ರೀತಿಸುವಂತೆ ವಿವಾಹಿತೆಯ ಹಿಂದೆ ಬಿದ್ದ ವಿವಾಹಿತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾಗಿರುವವನ ಹೆಸರು ನವೀನ್ (27), ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯ ನಿವಾಸಿ. ಮದುವೆಯಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ.
ನವೀನ್ ನಗರದಲ್ಲಿ ಕಾರ್ಪೇಂಟರ್ ಕೆಲಸ ಮಾಡಿಕೊಂಡಿದ್ದ. ನವೀನ್ ಗೆ ಮತ್ತೊಬ್ಬನ ಪತ್ನಿ ದೀಪಾ ಮೇಲೆ ಲವ್ ಶುರುವಾಗಿದೆ. ಪ್ರತಿ ದಿನ ಅಕೆಯ ಹೆಸರನ್ನು ಕನವರಿಸ್ತಾ, ಆಕೆಯ ಹೆಸರನ್ನು ಎದೆ ಮೇಲೆ ಹಚ್ಚೆ ಸಹ ಹಾಕಿಸಿಕೊಂಡಿದ್ದ. ಆಕೆಯ ಮೊಬೈಲ್ ನಂಬರ್ಗೆ ಲವ್ ಯೂ ಅಂತ ಮೆಸೇಜ್ ಮಾಡ್ತಿದ್ದನಂತೆ.
ನಂತರ ಆತನ ಬ್ಲಾಕ್ಮೇಲ್, ಹಿಂಸೆ, ಹುಚ್ಚು ಪ್ರೀತಿಗೆ ಮನಸೋತು ಆಗಾಗ ಲವ್ ಯೂ ಅಂತ ಮೆಸೇಜ್ ಮಾಡ್ತಿದ್ದಳಂತೆ, ಸ್ವತಃ ಆಕೆಯ ಗಂಡನ ಎದುರಲ್ಲೇ ನವೀನ್ ಆಗಮಿಸಿ, ಲವ್ ಮಾಡು ಲವ್ ಮಾಡು ಅಂತ ಕಾಡುತ್ತಿದ್ದ ಇದ್ರಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ನ್ಯಾಯ ಪಂಚಾಯಿತಿ ಸಹ ಆಗಿದೆಯಂತೆ. ಇತ್ತೀಚೆಗೆ ಆಕೆ. ನವೀನ್ ಕಾಟ ತಾಳಲಾರದೆ ಫೋನ್ ಬಳಸುವುದನ್ನೆ ಬಿಟ್ಟಿದ್ದಳಂತೆ..
ನವೀನ್ ತಾಯಿ ಪದ್ಮಾವತಮ್ಮ ಕಾಶಿ ಯಾತ್ರೆಗೆ ಹೋಗಿದ್ದು, ಆ ಸಮಯದಲ್ಲಿ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಬಿಟ್ಟು ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.