ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ, ತಾನೂ ವಿಷ ಸೇವಿಸಿದ ಯುವಕ! | JANATA NEWS
ದಾವಣಗೆರೆ : ಹಾಡುಗಲೇ ಯುವತಿಯ ಕತ್ತು ಕೊಯ್ದು ಕೊಲೆ ನಡೆದಿದ್ದು, ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಆಕ್ಟಿವ್ ಹೊಂಡಾದಲ್ಲಿ ತನ್ನ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ ತಡೆದು ಮಾತಾಡಿಸಿದ ಕೆಲ ಕ್ಷಣದಲ್ಲಿ ಮನ ಬಂದಂತೆ ಚುಚ್ಚಿ ಚುಚ್ಚಿ ಕೊಲೆ ಮಾಡಿ ತಾನು ಕೂಡಾ ಆಸ್ವತ್ರೆ ಸೇರಿದ್ದಾನೆ.
ವಿನೋಭನಗರದ ನಿವಾಸಿ ಚಾಂದ್ ಸುಲ್ತಾನಾ (24) ಕೊಲೆಯಾದ ಯುವತಿ. ಹರಿಹರ ನಗರದ ನಿವಾಸಿಯಾಗಿದ್ದ ಚಾಂದ್ ಪೀರ್ ಆಲಿಯಾಸ್ ಸಾದತ್ ಕೊಲೆ ಮಾಡಿದವ. ಕೊಲೆಯಾದ ಯುವತಿಗೆ ಕಳೆದ 7 ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಆಗಿತ್ತು.
ಚಾಂದ್ ಸುಲ್ತಾನಾಳನ್ನು ಯುವಕ ಪ್ರೀತಿಸುತ್ತಿದ್ದ, ಅಲ್ಲದೇ ಮದುವೆಯಾಗುವ ಬಯಕೆ ಹೊಂದಿದ್ದ. ತನ್ನ ಪ್ರೀತಿಯನ್ನು ಆಕೆಗೆ ತಿಳಿಸಿದ್ದ. ಆದರೆ, ಇದನ್ನು ಸುಲ್ತಾನಾ ನಿರಾಕರಿಸಿದ್ದಳು. ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎಂದು ಹೇಳಲಾಗಿದೆ.
ಸುಲ್ತಾನಾ ತನ್ನ ಕಚೇರಿಗೆ ಹೋಗುವ ರಸ್ತೆಗೆ ಬಂದಿದ್ದಾನೆ. ಸ್ವಲ್ಪ ಮಾತಾಡಬೇಕು ಎಂದು ರಸ್ತೆ ಬದಿಯ ಮರದ ಕೆಳಗೆ ಕರೆದು ಚಾಕು ಹಾಕಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಒಂದರಲ್ಲಿ ಯುವತಿ ಹಾಗೂ ಕೊಲೆ ಮಾಡಿದ ಹಂತಕ ನಿಂತುಕೊಂಡಿರುತ್ತಾರೆ. ಬೈಕ್ ಕೂತಿದ್ದ ಯುವತಿ, ಆರೋಪಿ ಜೊತೆ ಮಾತನಾಡುತ್ತಿದ್ದಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ನಂತರ ಏಕಾಏಕಿಯಾಗಿ ಆರೋಪಿ ಆಕೆಗೆ ಚಾಕು ಚುಚ್ಚುವುದನ್ನ ಗಮನಿಸಬಹುದು. ಚಾಕು ಚುಚ್ಚಿದ ಬೆನ್ನಲ್ಲೇ ಯುವತಿ ನೆಲಕ್ಕೆ ಬೀಳುತ್ತಾಳೆ. ಆಗ ಆರೋಪಿ ಬೈಕ್ ಹತ್ತಿಕೊಂಡು ಪರಾರಿಯಾಗುತ್ತಾನೆ.
ಯುವತಿ ಚಾಂದ್ ಸುಲ್ತಾನಾಳನ್ನು ಕೊಲೆ ಮಾಡಿದ ಆರೋಪಿ ಸಾದತ್ ಬಳಿಕ ವಿಷ ಸೇವಿಸಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆರೋಪಿಯನ್ನು ಆಸ್ಪತ್ರೆ ಸೇರಿಸಲಾಗಿದೆ. ಸ್ಥಳಕ್ಕೆ ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.