ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಸಾವು | JANATA NEWS
ಹಾವೇರಿ: : ಒಂದೇ ಕುಟುಂಬದ ಮೂವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ಅಗಡಿ ಗ್ರಾಮದ ಭಾರತಿ (38), ಕಿರಣ್ (24), ಸೌಜನ್ಯ (20) ಮೃತ ದುರ್ದೈವಿಗಳು.
ಕಿರಣ್ ಹಾಗು ಸೌಜನ್ಯ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಮತ್ತೊಬ್ಬ ಮಗ ಅರುಣ ಅದೇ ಗ್ರಾಮದ ಪಟ್ಟಣಶೆಟ್ಟಿ ಕುಟುಂಬಕ್ಕೆ ಸೇರಿದ ಯುವತಿಯನ್ನು ಪ್ರೀತಿಸುತ್ತಿದ್ದ.
ಇತ್ತೀಚಿಗೆ ಪ್ರೇಯಸಿ ಜತೆ ಊರು ಬಿಟ್ಟಿದ್ದ. ಇದೇ ವಿಚಾರಕ್ಕೆ ಯುವತಿಯ ಕುಟುಂಬಸ್ಥರು ಭಾರತಿ ಅವರ ಮನೆ ಬಳಿ ಗಲಾಟೆಯನ್ನೂ ಮಾಡಿದ್ದರು. ಜೊತೆಗೆ ಯುವತಿಯ ಮನೆಯವರು ಕಿರಣ್ ಕುಟುಂಬಸ್ಥರಿಗೆ ಹೊಡೆದಿದ್ದರು. ನಿಮ್ಮ ಮಗ ನಮ್ಮ ಹುಡುಗಿಯನ್ನ ಓಡಿಸಿಕೊಂಡು ಹೋಗಿದ್ದಾನೆಂದು ಹಿಂಸೆ ನೀಡುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಸಂಬಂಧಿಗಳು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.