ಕಾರು ಬಾನೆಟ್ ಮೇಲೆ ವ್ಯಕ್ತಿ ಸಿಲುಕಿದ್ದರೂ ಕಾರು ನಿಲ್ಲಿಸದೆ ಎಳೆದೊಯ್ದ ಮಹಿಳೆ | JANATA NEWS
ಬೆಂಗಳೂರು : ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಸಿಲುಕಿದ್ದರೂ ಕಾರು ನಿಲ್ಲಿಸದ ಮಹಿಳೆ ಹಾಗೇ ಚಲಾಯಿಸಿಕೊಂಡು ಹೋದ ಘಟನೆ ನಗರದ ಉಳ್ಳಾಲ ರಸ್ತೆಯ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.
ಶ್ವೇತಾ ಎಂಬ ಕಾರು ಚಾಲಕಿ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಆತ ಕಾರಿನ ಬಾನೆಟ್ ಮೇಲೆ ಬಿದ್ದರೂ ಕಾರು ನಿಲ್ಲಿಸದೇ ಸಾಗಿದ್ದಾಳೆ.
ಎರಡು ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತು. ಪ್ರಿಯಾಂಕಾ ಎಂಬುವರು ಟಾಟಾ ನಿಕ್ಸಾನ್ ಕಾರನ್ನು ಚಲಾಯಿಸುತ್ತಿದ್ದರು. ಮಾರುತಿ ಸ್ವಿಫ್ಟ್ ಕಾರನ್ನು ದರ್ಶನ್ ಎಂಬುವರು ಚಲಾಯಿಸುತ್ತಿದ್ದರು. ಅಪಘಾತದ ಬೆನ್ನಲ್ಲೇ ಪ್ರಿಯಾಂಕಾ ಅವರು ದರ್ಶನ್ಗೆ ಮಧ್ಯದ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ತಿಸಿದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ದರ್ಶನ್, ಪ್ರಿಯಾಂಕಾ ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಮಂಗಳೂರು ಪಿಯು ಕಾಲೇಜ್ ಬಳಿ ಕಾರನ್ನು ಅಡ್ಡಗಟ್ಟಿ ದರ್ಶನ್, ಪ್ರಶ್ನಿಸಲು ಹೋದಾಗ ಕೋಪಗೊಂಡ ಪ್ರಿಯಾಂಕಾ, ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ, ದರ್ಶನ್, ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಪ್ರಿಯಾಂಕಾ ಅವರು ಕಾರನ್ನು ಸುಮಾರು ಒಂದು ಕಿ.ಮೀ. ವರೆಗೂ ಚಲಾಯಿಸಿಕೊಂಡು ಹೋಗಿದ್ದಾರೆ.
ಬಳಿಕ ದರ್ಶನ್ ಮತ್ತು ಆಕೆಯ ಸ್ನೇಹಿತರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಬಾನೆಟ್ ಮೇಲಿದ್ದ ದರ್ಶನ್, ಸ್ನೇಹಿತರಾದ ಸುಜಯ್, ಯಶವಂತ್ ಹಾಗೂ ವಿನಯ್ ಎಂಬುವರನ್ನು ಬಂಧಿಸಲಾಗಿದೆ.