ಮಹಿಳೆಯರ ಪ್ರೀತಿ ವಿಶ್ವಾಸಕ್ಕಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ | JANATA NEWS
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಿಫ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ನಾನು ಯಾರಿಗೂ ಗಿಫ್ಟ್ ಅಂತಾ ಏನು ಕೊಡ್ತಿಲ್ಲ. ನಾನು ಮುಂಚೆಯಿಂದ ರಂಗೋಲಿ, ಹಳದಿ ಕುಂಕುಮ ಕಾರ್ಯಕ್ರಮ ಮಾಡ್ತಿದೀನಿ. ಒಬ್ಬ ಮಹಿಳೆಯಾಗಿ ಮಹಿಳೆಯರ ಜೊತೆ ಪ್ರೀತಿ ವಿಶ್ವಾಸ ಬಾಂಧವ್ಯ ಅಂತಾ ಮಾಡಿದೀನಿ.
ಗಿಫ್ಟ್ ಅಂತಾ ಆಗಿದ್ರೆ ನಾನು ಪುರುಷರಿಗೂ ಕೊಡಬೇಕಾಗಿತ್ತಲ್ವಾ? ಮತದಾರರು ಕೇವಲ ಮಹಿಳೆಯರಷ್ಟೇ ಇಲ್ಲ, ಪುರುಷರೂ ಇದ್ದಾರೆ. ಆದ್ರೆ ಒಬ್ಬಳು ಮನೆ ಮಗಳು ಅಂತಾ ನಾನಿವತ್ತು ಕರೆಸಿಕೊಳ್ಳುತ್ತೇನೆ. ನನ್ನ ಗಿಫ್ಟ್ ಅಷ್ಟೇ ಏಕೆ ನೋಡ್ತೀರಾ? ನಾನು ಮಾಡಿದ ಒಳ್ಳೆಯ ಕಾರ್ಯ ಏಕೆ ನೋಡ್ತಿಲ್ಲ? ಗುಡಿಗಳನ್ನು, ಜೈನ ಬಸದಿಗಳನ್ನು ಕಟ್ಟಿಸಿದ್ದು ಏಕೆ ನೋಡ್ತಿಲ್ಲ? ಕೋವಿಡ್ ಸಂದರ್ಭದಲ್ಲಿ ಇಡೀ ಕ್ಷೇತ್ರಕ್ಕೆ ಕಿಟ್ ಕೊಟ್ಟಿದ್ದು ಏಕೆ ನೋಡ್ತಿಲ್ಲ? ಕೋವಿಡ್ ವೇಳೆ ಇವರೆಲ್ಲಾ ಯಾರು ಇದ್ರು? ಎಂದು ಪ್ರಶ್ನಿಸಿದರು.
ಈಗ ಫ್ಲೆಕ್ಸ್ ಹಾಕಿ ನನ್ನ ಬಗ್ಗೆ ಮಾತನಾಡ್ತಾ ಇದ್ದಾರಲ್ಲ ಇವರಿಗೆ ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದ ಹೆಬ್ಬಾಳ್ಕರ್, ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇವರು ಎಲ್ಲಿದ್ರು? ಏನ್ ಮಾಡಿದ್ರು? ಯಾರ ಸಹಾಯಕ್ಕೆ ಬಂದ್ರು? ಎಷ್ಟು ಆಸ್ಪತ್ರೆಗೆ ಬಂದ್ರು? ಎಷ್ಟು ಆಕ್ಸಿಜನ್ ಎಷ್ಟುಇಂಜೆಕ್ಷನ್ ಕೊಡಿಸಿದ್ರು? ಪ್ರವಾಹ ವೇಳೆ ನನ್ನ ಕ್ಷೇತ್ರದಲ್ಲಿ ಮನೆಗಳು ಬಿದ್ದಾಗ ಎಲ್ಲಿ ಇದ್ರು? ಒಳ್ಳೆಯ ಕೆಲಸ ಏಕೆ ನೆನೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.