ಧಾರವಾಡದಲ್ಲಿ ವಿಧಿ ವಿಜ್ಞಾನ ವಿವಿಗೆ ಶಂಕುಸ್ಥಾಪನೆ, ಭಾರತವನ್ನು ವಿಶ್ವದ ನಂ. 1 ದೇಶವನ್ನಾಗಿ ಮಾಡಿ: ಅಮಿತ್ ಶಾ ಕರೆ | JANATA NEWS
ಧಾರವಾಡ : ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಮಾಲಿಕತ್ವದ ಪ್ರದೇಶದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಧಾರವಾಡದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಭಯೋತ್ಪಾದನೆ ಮಟ್ಟಹಾಕಿದೆ. ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ ಬಹುಮತದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ಹೊಂದಬೇಕಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ರಾಜ್ಯದ ಜನರಿಗೆ ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.
ದೆಹಲಿ ಬಿಟ್ಟರೆ ಫಾರೆನ್ಸಿಕ್ ವಿಭಾಗದಲ್ಲಿ ಕರ್ನಾಟಕ ಇದೆ. ಶಿಕ್ಷಣದಲ್ಲಿ ಮುಂದಿರುವ ಧಾರವಾಡಕ್ಕೆ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿಕೊಂಡಿದೆ. ಇಂತಹ ವಿಶ್ವವಿದ್ಯಾಲಯಗಳಿಂದ ಭವಿಷ್ಯದಲ್ಲಿ ಅತಿ ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿರುವ ದೇಶವಾಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.
ಭಾರತದಲ್ಲಿ ಮಾತ್ರ ವಿಧಿ ವಿಜ್ಞಾನ ವಿವಿಯಿದೆ. ಇಲ್ಲಿ ಓದಿದ ಎಲ್ಲರಿಗೂ ನೌಕರಿ ಸಿಕ್ಕುತ್ತದೆ. ಅಲ್ಲದೆ, ನಕಲಿ ನೊಟು, ಸೈಬರ್ ಅಪರಾಧ ಅಧಿಕವಾಗುತ್ತಿವೆ. ಹೀಗಾಗಿ ಅಪರಾಧಿಗಳಿಗಿಂತ ಪೊಲೀಸರು ಒಂದು ಹೆಜ್ಜೆ ಮುಂದಿಡಬೇಕು. ಅದಕ್ಕೆ ಇದು ಅಗತ್ಯ ಸಹಾಯ ಮಾಡಲಿದೆ. ಅಪರಾದ ಪತ್ತೆ ಮತ್ತು ಅಪರಾಧಿಗಳ ಸಾಕ್ಷ್ಯ ಪುರಾವೆ ಒದಗಿಸಲು ಈ ವಿವಿ ಸಹಾಯ ಮಾಡಲಿದೆ. ಸಾಕ್ಷ್ಯಗಳ ಸಲುವಾಗಿ ಕಾನೂನು ಬದಲಾಗಿದೆ ಎಂದರು.
ಚಂಡೀಗಢ, ಪುಣೆ, ಗುವಾಹಟಿ, ಕೋಲ್ಕತ್ತಾದಲ್ಲಿ ಪೋರೆನ್ಸಿಕ್ ಕ್ಯಾಂಪಸ್ ತೆರೆಯಲಾಗಿದೆ. ಧಾರವಾಡದಲ್ಲಿ ಆಗಿರುವ ಈ ಕ್ಯಾಂಪಸ್ ನಿಂದ ನೌಕರಿ ಸಿಗುತ್ತದೆ. ಈ ಭಾಗದಲ್ಲಿ ಅಪರಾಧ ತಡೆಗೆ ಸಹಾಯ ಮಾಡುತ್ತದೆ ಎಂದರು.
ಧಾರವಾಡದಲ್ಲಿಯೇ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಮಾಡಿಕೊಡಬೇಕು ಎಂದು ಪ್ರಹ್ಲಾದ್ ಜೋಶಿ ಬೆನ್ನು ಬಿದ್ದಿದ್ದರು. ನಾನು ಕಾಡಿಸಬೇಕು ಅಂತಾನೆ ಜಾಗವೇ ಇಲ್ಲ, ಇಲ್ಲಿ ಹೇಗೆ ಮಂಜೂರು ಮಾಡಲಿ ಎಂದು ಹೇಳಿದ್ದೆ. ಆದರೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೆ ಹುಡುಕಿ ಕೊಟ್ಟರು. ಆಗ ನನಗೆ ಬೇರೆ ದಾರಿಯೇ ಇಲ್ಲದೇ ಕ್ಯಾಂಪಸ್ ಮಂಜೂರು ಮಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.