ಪಾರ್ಕ್ನಲ್ಲಿ ಯುವಕ-ಯುವತಿ ಜೊತೆಯಲ್ಲಿ ಕುಳಿತಿದ್ದಕ್ಕೆ ಹಣ ವಸೂಲಿ ಪ್ರಕರಣ, ಹೋಮ್ ಗಾರ್ಡ್ ಬಂಧನ | JANATA NEWS
ಬೆಂಗಳೂರು : ಪಾರ್ಕಿನಲ್ಲಿ ಯುವಕ ಯುವತಿ ಬಳಿ ಸಾವಿರ ರೂಪಾಯಿ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಗೃಹ ರಕ್ಷಕದಳದ ಸಿಬ್ಬಂದಿಯನ್ನ ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ರೆಡ್ಡಿ ಬಂಧಿತ ಆರೋಪಿ. ಜನವರಿ 29 ರಂದು ಕುಂದಲಹಳ್ಳಿ ಲೇಕ್ ಬಳಿ ಕುಳಿತಿದ್ದ ಯುವಕ ಮತ್ತು ಯುವತಿಯನ್ನ ಪೊಲೀಸ್ ಹೆಸರಿನಲ್ಲಿ ಬೆದರಿಸಿದ್ದ ಆರೋಪಿ ಒಂದು ಸಾವಿರ ರೂ. ಪಡೆದು ತೆರಳಿದ್ದರು.
ಈತ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಕುಂದಲಹಳ್ಳಿ ಕೆರೆ ಭದ್ರತೆಗೆ ನಿಯೋಜನೆ ಆಗಿದ್ದ. ಇಂದು ಬೆಳಗ್ಗೆ ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್ ಎಂಟ್ರಿ ಕೊಟ್ಟ ಮುಂಜನಾಥ್ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದರು.
ಈ ಘಟನೆಯಿಂದ ಬೇಸತ್ತಿದ್ದ ಯುವತಿ, ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾದ ಕಹಿ ಅನುಭವವನ್ನು ವಿವರಿಸಿ ಆರೋಪಿಯ ಬೈಕ್ ಫೋಟೋ ಸಹಿತ ಟ್ವೀಟ್ ಮಾಡಿದ್ದರು. ಕೂಡಲೇ ಪೊಲೀಸ್ ಆಯುಕ್ತರು ಆ ಪೊಲೀಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಚ್ಎಎಲ್ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.