ಕಾಣೆಯಾಗಿದ್ದ ಗೋವಿಂದ ರಾಜು ಚಾರ್ಮಾಡಿ ಘಾಟ್ ಬಳಿ ಶವವಾಗಿ ಪತ್ತೆ | JANATA NEWS
ಬೆಂಗಳೂರು : ಕೆಲ ದಿನಗಳ ಹಿಂದೆ ಗೋವಿಂದರಾಜು ಕುಟುಂಬಸ್ಥರು ಕಾಣೆಯಾದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ವೃತ್ತಿಯಲ್ಲಿ ಪೇಂಟರ್ ಆಗಿರುವ ಗೋವಿಂದರಾಜು ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದನಂತೆ. ಹುಡುಗಿ ಕಾಲೇಜಿಗೆ ಹೊದಾಗ ಗೊವಿಂದರಾಜು ಯುವತಿಗೆ ಕರೆ ಮಾಡಿದ್ದಾನೆ. ಆದರೆ ಕಾಲೇಜಿಗೆ ಹೊಗುವಾಗ ಯುವತಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೊಗಿದ್ದಾಳೆ.
ನಂತರ ಮೆಸೇಜ್ ಮಾಡಿದ್ದಾನೆ. ಅದನ್ನ ಆಕೆಯ ಸೋದರ ಮಾವ ನೋಡಿದ್ದು, ತಾನು ಮದುವೆಯಾಗಬೇಕು ಅಂದುಕೊಂಡಿದ್ದ ಹುಡುಗಿಗೆ ಆತ ಕಳುಹಿಸಿದ ಮೆಸೆಜ್ ನೋಡಿ ಕೊಪಗೊಂಡಿದ್ದಾನೆ. ಯುವಕನನ್ನ ಮಾತಾಡೊ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದಾರೆ ಎಂದು ಗೊವಿಂದರಾಜ್ ಸಂಬಂಧಿ ಎಂಬುವವರು ಹೇಳಿದ್ದರು.
ಪೋಲಿಸರು ಆರೋಪಿ ಅನಿಲ್ ಮತ್ತು ಭರತ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಗೋವಿಂದರಾಜನನ್ನು ಮತ್ತಿಕೆರೆಯಿಂದ ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ ಮೃತದೇಹವನ್ನು ಜಿಲ್ಲೆಯ ಮೂಡಿಹೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಸಾವಿರಾರು ಅಡಿ ಆಳದ ಪ್ರಪಾತದಲ್ಲಿ ಎಸೆದಿದ್ದರು ಎನ್ನುವುದು ತಿಳಿದುಬಂದಿದೆ.
ಮಾಹಿತಿ ಆಧರಿಸಿ ಚಾರ್ಮುಡಿ ಘಾಟ್ಗೆ ತೆರಳಿದ ಖಾಕಿ ತಂಡ ಮೃತದೇಹವನ್ನ ಹುಡುಕಿದ್ದು, ಪ್ರಕರಣ ಆರೋಪಿ ಅನಿಲ್ ಸೇರಿದಂತೆ ಮೂವರನ್ನ ವಶಕ್ಕೆ ಪಡೆದಿದ್ದಾರೆ.