ಪ್ರೀತಿಸುವಂತೆ ಡಾಕ್ಟರ್ ನಿಂದ ಒತ್ತಾಯ, ಕಿರುಕುಳ ತಾಳಲಾರದೆ ದಂತ ವೈದ್ಯೆ ಆತ್ಮಹತ್ಯೆ | JANATA NEWS
ಬೆಂಗಳೂರು : ಪ್ರೀತಿಸುವಂತೆ ಯುವಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಾಂಕ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಉತ್ತರಪ್ರದೇಶ ಲಖನೌ ಮೂಲದ ಪ್ರಿಯಾಂನ್ಷಿ ತ್ರಿಪಾಠಿ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಇಂಟರ್ನ್ಶಿಪ್ ಮುಗಿಸಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು.
ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯ ಸುಮಿತ್, ತನ್ನನ್ನು ಮದ್ವೆ ಆಗುವಂತೆ ಯಾವಾಗಲೂ ಒತ್ತಾಯ ಮಾಡ್ತಾ ಇದ್ದ. ಆದರೆ ಆತನ ಪ್ರೀತಿಯನ್ನು ಪ್ರಿಯಾಂಕ ನಿರಾಕರಿಸಿದ್ದಳು. ಹೀಗಿದ್ದರೂ ದಿನೇ ದಿನೇ ಸುಮಿತ್ ಕಾಟ ಹೆಚ್ಚಾಗಿತ್ತು.
ಪ್ರಿಯಾಂಕಳ ನಡತೆ ಸರಿಯಿಲ್ಲ ಎಂದು ಆಸ್ಪತ್ರೆಯಲ್ಲಿ ಅಪಪ್ರಚಾರ ಮಾಡಿದ್ದ. ಇದರಿಂದ ಮನನೊಂದು ಮನೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.