ಹೃದಯ ವಿದ್ರಾವಕ ಘಟನೆ: ಎಳೆ ಕಂದಮ್ಮನನ್ನು ಬಲಿ ಪಡೆದ ಟ್ರಾಫಿಕ್ ಜಾಮ್ | JANATA NEWS
ಬೆಂಗಳೂರು : ಟ್ರಾಫಿಕ್ ಜಾಮ್ ಎಳೆ ಕಂದಮ್ಮನನ್ನು ಬಲಿ ಪಡೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಅತಿಯಾದ ಟ್ರಾಫಿಕ್ ನಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಮಗುವನ್ನು ತುರ್ತು ಚಿಕಿತ್ಸೆಗೆಂದು ಹಾಸನದಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ನಲ್ಲಿ ಕರೆತರಲಾಗುತ್ತಿತ್ತು.
ಮಗುವಿದ್ದ ಅಂಬ್ಯುಲೇನ್ಸ್ ಹಾಸನದಿಂದ ಮೂಲಕ ಕೇವಲ ಒಂದು ಗಂಟೆಯಲ್ಲೇ ಜಿರೋ ಟ್ರಾಫಿಕ್ ನಲ್ಲಿ ನೆಲಮಂಗಲ ತಲುಪಿತ್ತು. ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್ ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು.
ಟ್ರಾಫಿಕ್ ಜಾಮ್ನಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಒಂದೂವರೆ ವರ್ಷದ ಮಗು ದುರಂತ ಸಾವಿಗೀಡಾಗಿದೆ. ಇದರ ನಡುವೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಆಂಬ್ಯುಲೆನ್ಸ್ಗೆ ದಾರಿ ಸಿಗದೇ ಮಗು ಮೃತಪಟ್ಟಿದೆ.