ರಾಜ್ಯದಲ್ಲಿ ಬಿಜೆಪಿ 13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ರಚನೆ, ಸಿಎಂ ಬೊಮ್ಮಾಯಿ ಕೂಡಲೇ ರಾಜೀನಾಮೆ ಕೊಡಲಿ | JANATA NEWS
ಹುಬ್ಬಳ್ಳಿ: : ರಾಜ್ಯದಲ್ಲಿ ಬಿಜೆಪಿ 13 ಜನರನ್ನು ಮಂಚದ ಮೇಲೆ ಮಲಗಿಸಿ ಸರಕಾರ ರಚಿಸಿದ್ದು ಇವರಿಗೆ ನಾಚಿಕೆ ಆಗಬೇಕು. ಹೀಗಾಗಿ ಕೂಡಲೇ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಟ್ಟು ಹೊರಗಡೆ ಬರಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿ ಸಿ.ಡಿ ತಗೊಂಡು ಗೃಹಸಚಿವರ ಹತ್ರ ಹೋಗಿದ್ದಾರೆ, ವಿಷಕನ್ಯೆ ಬಗ್ಗೆ ಮಾತಾಡ್ತಾರೆ. ಕಟೀಲು ಪಿಟೀಲು ಬಾರಿಸಿ ಲವ್ ಜಿಹಾದ್ ಬಗ್ಗೆ ಮಾತಾಡ್ತಾನೆ. ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಟಿಕೊಂಡು ಸಿಎಂ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದಾನಂದಗೌಡ ಸೇರಿ 12 ಜನರ ಸಿ.ಡಿ ಹೊರಗೆ ತರಬೇಕು. ಇಲ್ಲದಿದ್ದರೇ ಬಿಜೆಪಿ ನಾಯಕರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಸ್ಯಾಂಟ್ರೋ ರವಿ ಈಗ ಎಲ್ಲಿದ್ದಾನೆ? ಅವನ ಬಗ್ಗೆ ಸುದ್ದಿನೇ ಇಲ್ಲ. ಮಂಚ ಮುರಿಯೋದೆ ಅಚ್ಚೇ ದೀನ್ ನಾ? ಇದಕ್ಕೆ ಮೋದಿ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಕೂಡಲೇ ಎಲ್ಲರ ಕ್ಯಾಸೆಟ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಲು ಸಿದ್ಧರಾಗಬೇಕು ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದರು.
ಪಿಟೀಲು ಬಾರಿಸುತ್ತಿರುವ ನಳಿನ್ ಕುಮಾರ್ ಕಟೀಲ್ ರಸ್ತೆ ಬೇಡಾ ಲವ್ ಜಿಹಾದ್ ಬಗ್ಗೆ ಮಾತಾಡಿ ಎನ್ನುತ್ತಿದ್ದಾರೆ. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಡಿಸಲಾಗಿದೆ. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಹ್ಲಾದ್ ಜೋಶಿ ಅವರೇ ಈದ್ಗಾ ಮೈದಾನದಲ್ಲಿ ಗಣಪತಿ ಕುರಿಸಿ ಪೂಜೆ ಮಾಡಿದ್ದೀರಿ. ಬೈರಿದೇವರಕೊಪ್ಪದ ದರ್ಗಾ ತೆರವು ಮಾಡಿದ್ದೀರಿ. ಇದರಿಂದ ನಿಮಗೆ ಏನೂ ಸಿಕ್ಕಿತ್ತು. ಜನರ ಮನಸ್ಸಿನಲ್ಲಿ ಗಣಪತಿ ಕುಳ್ಳಿರಿಸಕಿತ್ತು. ಆ ಕೆಲಸವನ್ನು ನೀವು ಮಾಡಲಿಲ್ಲ. ಶಾಸಕ ಅರವಿಂದ ಬೆಲ್ಲದ್ ಅವರ ಜಾಗವನ್ನು ಉಳಿಸಲು ದರ್ಗಾ ತೆರವು ಮಾಡಿದೀರಿ. ಮುಂದೆ ಇಂತಹ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ರಾಜೀನಾಮೆ ಕೊಟ್ಟು ಬಂದ 13 ಜನರು ದರಿದ್ರರು, ಬಿಜೆಪಿಯಲ್ಲಿ ದರಿದ್ರ ಗ್ರಹಗಳು ಸೇರಿಕೊಂಡಿವೆ. ಅವುಗಳನ್ನು ಜನರೇ ತೆಗೆದುಹಾಕಬೇಕು. ದೇವೆಗೌಡರು ರಾಜಕೀಯದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ ಎಂದರು.
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ದೇವೇಗೌಡರ ವಿರುದ್ಧ ಒಮ್ಮೆಯೂ ಮಾತನಾಡಲಿಲ್ಲ, ಸಿದ್ದರಾಮಯ್ಯ ಜಮೀರ್ ಅಹಮ್ಮದ್ ಅವರನ್ನು ಇಟ್ಟುಕೊಂಡು ಹಾಲಲ್ಲಿ ವಿಷ ಹಾಕತ್ತಾ ಇದ್ದಾರೆ. ಹುಮನಾಬಾದ್ ನಲ್ಲಿ ನನ್ನ ಮಗ ಹಾಗೂ ಬಿಜೆಪಿಗೆ ನೇರ ಹಣಾಹಣಿ ಇದೆ. ಅಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಇದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿದೆ. ಹೀಗಾಗಿ ನನ್ನ ಮಗ ಗೆಲ್ಲಲಿದ್ದಾನೆ. ಈ ಮೂಲಕ ಜನತಾದಳ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.