ಅಂಗನವಾಡಿಯಲ್ಲಿ ಬಿಸಿ ಸಾಂಬಾರ್ ಬಿದ್ದು 6 ವರ್ಷದ ಕಂದಮ್ಮ ಗಂಭೀರ! | JANATA NEWS
ಮಂಡ್ಯ : 6 ವರ್ಷದ ಬಾಲಕಿ ಮೇಲೆ ಬಿಸಿ ಸಾಂಬಾರು ಬಿದ್ದಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್- ಪೂಜಾ ದಂಪತಿ ಮಂಗಳು ನಿಹಾರಿಕಾ (5) ಮೇಲೆ ಸಾಂಬಾರು ಬಿದ್ದಿದೆ. ಅಂದು ಊಟದ ಸಮಯದಲ್ಲಿ ನಿಹಾರಿಕಾ ಓಡಿ ಹೋಗಿದ್ದಾಳೆ. ಆ ಕಡೆಯಿಂದ ಅಂಗನವಾಡಿಯ ಆಯಾ ಲಕ್ಷ್ಮಿ ಮಕ್ಕಳಿಗೆ ಊಟ ಬಡಿಸಲು ಬಿಸಿ ಸಾಂಬಾರ್ನ್ನು ತರುತ್ತಿದ್ದ ವೇಳೆ ಇಬ್ಬರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಹೀಗಾಗಿ ಬಾಲಕಿಯ ಮುಖ, ಬೆನ್ನಿನ ಮೇಲೆ ಸಾಂಬಾರು ಬಿದ್ದಿರುವುದರಿಂದ ಮಾತನಾಡಲು ಹಾಗೂ ಊಟ ಮಾಡಲಾಗದ ಸ್ಥಿತಿಯಲ್ಲಿದ್ದಾಳೆ.
ಮಂಜುನಾಥ್ ದಂಪತಿ ಮೂಲತಹ ದಾವಣಗೆರೆಯವರು ಮದ್ದೂರಿನಲ್ಲಿ ಮಸಾಲೆ ವ್ಯಾಪಾರ ಮಾಡುತ್ತಿದ್ದಾರೆ. ಮಗಳನ್ನ ಅಂಗನವಾಡಿಗೆ ಬಿಟ್ಟು ವ್ಯಾಪಾರ ಮಾಡಲು ಹೋಗಿದ್ದರು. ಈ ವೇಳೆ ಘಟನೆ ನಡೆದಿದೆ. ಈ ವೇಳೆ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿವೆ. ತಾಲೂಕು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.