ಡಿಎಂಕೆ ಕೌನ್ಸಿಲರ್ ಹಾಗೂ ಬೆಂಬಲಿಗರಿಂದ ಭಾರತೀಯ ಸೈನಿಕನ ಕಗ್ಗೊಲೆ : ಇನ್ನೋರ್ವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ | JANATA NEWS
ಕೃಷ್ಣಗಿರಿ : ತಮಿಳುನಾಡಿನ ಕೃಷ್ಣಗಿರಿಯಲ್ಲಿ ನೀರಿನ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿವಾದದ ಹಿನ್ನೆಲೆಯಲ್ಲಿ ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ ಮತ್ತು ಇತರರು ಭಾರತೀಯ ಸೇನೆಯ ಸೈನಿಕನೊರ್ವನನ್ನು ಹೊಡೆದು ಕೊಂದಿದ್ದಾರೆ.
ಮೃತ ಯೋಧನನ್ನು ನಾಗೋಜನಹಳ್ಳಿಯ ಎಂ.ಪ್ರಭು (28) ಎಂದು ಗುರುತಿಸಲಾಗಿದೆ. ಬಳಿಕ, ಚಿನ್ನಸಾಮಿ ಪುತ್ರ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗರಸಂಪಟ್ಟಿ ಪೊಲೀಸರ ಪ್ರಕಾರ, ಸೇನೆಯಲ್ಲಿ ಕೆಲಸ ಮಾಡುತ್ತಿರುವ ಪ್ರಭು ಮತ್ತು ಅವರ ಹಿರಿಯ ಸಹೋದರ ಎಂ ಪ್ರಭಾಕರನ್ (30) ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.
ಫೆಬ್ರವರಿ 8 ರಂದು ಸೈನಿಕರ ಕುಟುಂಬವನ್ನು ಥಳಿಸಲಾಯಿತು. ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ ಅವರು ಒಂಬತ್ತು ಮಂದಿಯೊಂದಿಗೆ ಪ್ರಭಾಕರನ್ ಮತ್ತು ಅವರ ಸಹೋದರ ಪ್ರಭು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಗಲಿನಲ್ಲಿ ಬಟ್ಟೆ ಒಗೆಯುತ್ತಿದ್ದಾಗ ನಮ್ಮ ಜಗಳ ಶುರುವಾಯಿತು. ನಂತರ ಸಂಜೆ ಕೌನ್ಸಿಲರ್ ನಮ್ಮ ಮನೆಗೆ ಬಂದು ನನ್ನ ತಂದೆಯನ್ನು ನಿಂದಿಸಲು ಪ್ರಾರಂಭಿಸಿದನು ಮತ್ತು ನಂತರ ಚಾಕುವಿನಿಂದ ಹಲ್ಲೆ ಮಾಡಿದನು. ನನಗೆ 6-7 ಜನ ಹೊಡೆದಿದ್ದಾರೆ. ಸಾವನಪ್ಪಿರುವ ನನ್ನ ಸಹೋದರನಿಗೆ ಸ್ಟೀಲ್ ರಾಡ್ ಮತ್ತು ಚಾಕುವಿನಿಂದ ಹೊಡೆದರು. ಅದರ ನಂತರ, ಆತನು 6 ದಿನಗಳ ಕಾಲ ಐಸಿಯುನಲ್ಲಿದ್ದ ಆದರೆ ಅಂತಿಮವಾಗಿ ನಿಧನನಾದ, ಎಂದು ಕೃಷ್ಣಗಿರಿಯಲ್ಲಿ ಡಿಎಂಕೆ ಕೌನ್ಸಿಲರ್ನಿಂದ ಕೊಲ್ಲಲ್ಪಟ್ಟ ಸೇನಾ ಸಿಬ್ಬಂದಿಯ ಸಹೋದರ ಎಎನ್ಐಗೆ ಹೇಳಿದರು.