ಅಧಿಕಾರಿಗಳಿಗೆ ಖಾಸಗಿ ಫೋಟೋ ಕಳುಹಿಸುತ್ತಿದ್ದ ರೋಹಿಣಿ ಸಿಂಧೂರಿ: ಡಿ. ರೂಪಾ ಆರೋಪ | JANATA NEWS
ಬೆಂಗಳೂರು : ಐಎಎಸ್ ಅಧಿಕಾರಿಗಳಿಗೆ ತನ್ನ ಖಾಸಗಿ ಫೋಟೋಗಳನ್ನು ರೋಹಿಣಿ ಸಿಂಧೂರಿ ಅವರು ಕಳುಹಿಸಿದ್ದಾರೆ ಎಂದು ಡಿ. ರೂಪಾ ಆರೋಪ ಮಾಡಿದ್ದಾರೆ.
ಇಂದು ತಮ್ಮ ಪೋಸ್ಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಶಾಸಕರ ಬಳಿಗೆ ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋದ ವಿಷಯ ತಿಳಿದು ಅಚ್ಚರಿಯಾಯಿತು. ಐಐಎಸ್ ಅಧಿಕಾರಿ ಆಗಿ ರಾಜಕಾರಣಗಿಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ಶಾಸಕರ ಬಳಿ ಐಎಎಸ್ ಅಧಿಕಾರಿ ಸಂಧಾನದಕ್ಕೆ ಹೋಗಿದ್ದು ಇದೇ ಮೊದಲು. ರೋಹಿಣಿ ಶಾಸಕರ ಬಳಿ ಸಂಧಾನಕ್ಕೆ ಹೋಗುವ ಅಗ್ಯ ಏನಿತ್ತು? ಎಂದು ಪ್ರಶ್ನಿಸಿದರು.
ನನಗೆ ರೋಹಿಣಿ ಸಿಂಧೂರಿ ಪೋಟೋ ಸಿಕ್ಕಿದ್ದು ಈಗ, ಕಳೆದ ಒಂದು ತಿಂಗಳ ಹಿಂದೆ ನನಗೆ ಸಿಕ್ಕಿದೆ. ಹೀಗಾಗಿ ಹಾಕಿದ್ದೇನೆ. ಈ ಪೋಟೋಗಳು ಯಾವುದೇ ಖಾಸಗಿ ತನಕ್ಕೆ ಧಕ್ಕೆ ತರುವಂತ ವಿಚಾರವಲ್ಲ. ಸರ್ವಿಸ್ ಕಂಡಕ್ಟ್ ರೂಲ್ಸ್ ಇರುತ್ತದೆ. ಆ ಪ್ರಕಾರ ಮಾದರಿಯನ್ನು ಮೆರೆಯಬೇಕು ಎಂಬುದಿದೆ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದರು.
ಆಲ್ ಇಂಡಿಯಾ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್, ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾ ಸತ್ಯತೆ ಹೊರ ಬರಬೇಕಿದೆ ಎಂದು ಆರೋಪಿಸಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ದ ರೂಪ ಮಾಡಿರುವ ಆರೋಪವೇನು?
ಆತ್ಮಹತ್ಯೆ ಮಾಡಿಕೊಂಡಿರುವ ಡಿಕೆ.ರವಿ ಅವರ ಬಗ್ಗೆ ಕೂಡ ರೂಪ ಅವರು ಪ್ರಸ್ತಾಪ ಮಾಡಿದ್ದು, ಅವರನ್ನು ಬ್ಲಾಕ್ ಮಾಡಬೇಕಾಗಿತ್ತು, ಎಂದಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಬರೆದಿರುವ ಅವರು, "ನೀವು ಕೆಲವರು ರೋಹಿಣಿ ಸಿಂಧೂರಿ ಕಳಿಸಿದ ಸಾಲುಗಳನ್ನು ಕಳಿಸಿದ್ದೀರಿ. ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು mental illness ಇಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಲಿಸಿದರೆ? ನನ್ನ ಪ್ರಶ್ನೆ ಇಷ್ಟೇ...ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ias ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ?
ಅವರು ಯಾವ forum ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ," ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಮಂಡ್ಯದಲ್ಲಿ ಆಗಿರುವ ಶೌಚಾಲಯಗಳ ನಿರ್ಮಾಣದ ಬಗ್ಗೆ ಕೂಡ ಅವರು ಆರೋಪ ಮಾಡಿದ್ದು, ಅಂಕಿ ಸಂಖ್ಯೆಗಳ ಬಗ್ಗೆ ಸರಿಯಾಗಿ ತನಿಖೆ ಮಾಡಿಲ್ಲ ಅಂತ ಹೇಳಿದ್ದಾರೆ
ಚಾಮರಾಜನಗರ ಆಕ್ಸಿಜನ್ ಬಗ್ಗೆ ಕೂಡ ರೂಪ ಆರೋಪ ಮಾಡಿದ್ದು, ಜವ್ದಾರಿಯುತವಾಗಿ ಕೂಡ ಅವರು ನಡೆದುಕೊಂಡಿಲ್ಲ ಅಂಥ ಹೇಳಿದ್ದಾರೆ
ರಾಜ್ಯದ ರಾಜಕಾರಣಿಯೊಬ್ಬರ ಜೊತೆಗೆ ರಾಜೀ ಸಂಧಾನ ಬಗ್ಗೆ ಕೂಡ ರೂಪ ಪ್ರಶ್ನೆ ಮಾಡಿದ್ದಾರೆ
ಸಿಗೋ ಬ್ಯಾಗ್ ಗಳನ್ನು ಜಿಲ್ಲಾಧಿಕಾರಿ 52 ರೂಪಾಯಿ ನೀಡಿ ಖರೀದಿಸಿದ್ದರು ಎನ್ನುವ ಆರೋಫ ಕೂಡ ರೋಹಿಣಿಯವರ ಮೇಲಿದೆ.
ಐಪಿಎಸ್ ಅಧಿಕಾರಿ N.ಹರೀಶ್ ಅವರ ಸಾವಿನ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿದ್ದು, ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಅಂತ ಹೇಳಿದ್ದಾರೆ.
ಕೆಲವುವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ not so decent ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಜಾಲಹಳ್ಳಿಯಲ್ಲಿ ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returnsನಲ್ಲಿ ಈ ಮನೆಯ ಉಲ್ಲೇಖ ಇರದೇ ಬೇರೆಲ್ಲಾ ಲಂಗು ಲೊಟ್ಟು ಪ್ರಾಪರ್ಟಿ ಬಗ್ಗೆ ವರದಿ ಕೊಟ್ಟಿದ್ದಾರೆ ಅಂಥ ರೂಪ ಆರೋಪಿಸಿದ್ದಾರೆ.