ಸಿದ್ದಾರೂಢ ಜಾತ್ರಾ ರಥೋತ್ಸವ ದಿನವೇ ಮನಬಂದಂತೆ ಕೊಚ್ಚಿ ಯುವಕನ ಕೊಲೆ | JANATA NEWS
ಹುಬ್ಬಳ್ಳಿ : ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನವೇ ಹಾಡುಹಗಲೆ ಯುವಕನೊಬ್ಬನನ್ನುಮನಬಂದಂತೆ ಕೊಚ್ಚಿ ಕೊಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಹಾಡಹಗಲೇ ಹುಬ್ಬಳ್ಳಿಯಲ್ಲಿ ಅದು ಸಿದ್ದಾರೂಢನ ಜಾತ್ರೆ ದಿನವೇ ನೆತ್ತರು ಹರದಿರೋದಕ್ಕೆ ಹುಬ್ಬಳ್ಳಿ ಜನ ಬೆಚ್ಚಿ ಬಿದ್ದಿದ್ದಾರೆ.
ಯುವಕನನ್ನ ನಾಗರಾಜ್ ಚಲವಾದಿ (26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆತ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ.
ಐತಿಹಾಸಿಕ ಸಿದ್ದಾರೂಢ ರಥೋತ್ಸವ ನಿಮಿತ್ತ ಆತನ ಸ್ನೇಹಿತರು ಭಕ್ತರಿಗೆ ಪಲಾವ್ ಮಾಡಿಸಿದ್ದರು ಆದನ್ನು ಕೊಡುವ ನೆಪದಲ್ಲಿ ಆತನನ್ನು ಕರೆದಿದ್ದರು. ಹಳೇ ವೈಷಮ್ಯದಿಂದ ಆತನ ಜೊತೆಗಿದ್ದವರೇ ನಾಗರಾಜ್ ಕಣ್ಣಿಗೆ ಖಾರದ ಪುಡಿ ಹಾಕಿ ಹಾಡಹಗಲಲ್ಲೆ ಸಿಕ್ಕ ಸಿಕ್ಕಲ್ಲಿ ತಲ್ವಾರ್, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.
ಮಗನನ್ನ ಕಳೆದುಕೊಂಡ ತಾಯಿ ಲಕ್ಷ್ಮೀ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.