ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ, ದೇವೇಗೌಡರು ನಮಗೆ ಆದರ್ಶ: ಬಿಎಸ್ ವೈ | JANATA NEWS
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಾಗ ನಾನು ಒಬ್ಬನೇ ಇದ್ದೆ. ನನ್ನ ರಾಜಕೀಯ ಜೀವನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಬಗ್ಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇನೆ. ನಾನಿಂದು ಇಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ಅದಕ್ಕೆ ಆರ್ಎಸ್ಎಸ್ ಕಾರಣ ಎಂದರು.
ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ. ನನಗೆ ಅನೇಕ ಅವಕಾಶಗಳನ್ನು ಆರ್ಎಸ್ಎಸ್ ನೀಡಿದೆ ಎಂದ ಅವರು, ನಮಗೆಲ್ಲರಿಗೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಆದರ್ಶ. ಈ ವಯಸ್ಸಲ್ಲೂ ಕೂಡ ಅವರು ನಮ್ಮ ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ಚಿಂತನೆ ಮಾಡುತ್ತಾರೆ. ಅವರಿಂದ ಕಲಿಯುವುದು ನಮಗೆ ಬಹಳಷ್ಟಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಪ್ರಸ್ತುತ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಂದಿನ ಅಧಿವೇಶನದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಬೇಕು. ಈ ಸದನಕ್ಕೆ ಮಹಿಳೆಯರು ಹೆಚ್ಚು ಆಯ್ಕೆಯಾಗಿ ಬರಬೇಕು ಎಂದರು.
ಯಾರೂ ಇರಲಿಲ್ಲ, ಶಾಸನ ಸಭೆಯಲ್ಲಿ ನಾವು ಇಬ್ಬರೇ ಇದ್ದೆವು. ಅಂದು ಯಾರೂ ಇರಲಿಲ್ಲ ನಮ್ಮ ಜೊತೆ, ವಸಂತ ಬಂಗೇರ ವರು ನಮ್ಮನ್ನು ಕೈಬಿಟ್ಟು ಹೋದರು. ಎಂದೂ ನಾನು ವಾಪಸ್ ತಿರುಗಿ ನೋಡಲಿಲ್ಲ, ನಾಡಿನ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದರು.
”ನನಗೆ ಅತ್ಯಂತ ತೃಪ್ತಿ ತಂದದ್ದು, ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಸಿಗದಿದ್ದಾಗ ವಿಧಾನಸೌಧದಲ್ಲಿ ಧರಣಿ ಕುಳಿತೆ, ಕೊನೆಗೆ ಅಂದಿನ ಸಿಎಂ ಆಗಿದ್ದ ಎಸ್.ಎಂ .ಕೃಷ್ಣ ಅವರು ಅದಕ್ಕೊಂದು ಪರಿಹಾರ ನೀಡಿದರು” ಎಂದು ನೆನಪಿಸಿಕೊಂಡರು.
”ನಾನು ಇಷ್ಟು ಎತ್ತರಕ್ಕೆ ಏರಬೇಕಾದರೆ, ನಿಲ್ಲಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಾರಣ. ಅಲ್ಲಿ ಸಿಕ್ಕ ತರಬೇತಿ , ಅವಕಾಶ, ಮಾರ್ಗದರ್ಶನ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ”ಎಂದರು.
ನಾನು ಶಿಕಾರಿಪುರದ ಜನತೆಗೆ ಚಿರಋಣಿ, ಬದುಕಿನ ಕೊನೆಯುಸಿರು ಇರುವ ವರೆಗೆ ಅವರ ಸೇವೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು. ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಒಂದು ದಿನವೂ ನನ್ನ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.