ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು 6 ವರ್ಷದ ಮಗು ದಾರುಣ ಸಾವು | JANATA NEWS
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವನ್ನಪ್ಪಿರೋ ಘಟನೆ ಸುಲ್ತಾನ್ ಪೇಟೆ ಬಳಿ ನಡೆದಿದೆ.
ಬಿಲ್ಡಿಂಗ್ ಕೆಲಸಕ್ಕೆ ಬಂದಿದ್ದ ದಂಪತಿಯ ಮಗಳು ಮಹೇಶ್ವರಿ(6) ಎಂಬ ಆರು ವರ್ಷದ ಮಗು ಆಟವಾಡುತ್ತಿದ್ದಾಗ ಲಿಫ್ಟ್ಗೆಂದು ತೆಗೆದಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಸುಲ್ತಾನ್ ಪೇಟೆಯ ವಿಕ್ರಮ್ ಎಂಬುವವರಿಗೆ ಸೇರಿರುವ ಜಾಗದಲ್ಲಿ ಈ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಈ ಬಿಲ್ಡಿಂಗ್ ಕಟ್ಟಲು ಬಿಬಿಎಂಪಿ 1+4=5 ಮಹಡಿಗೆ ಮಾತ್ರ ಅನುಮತಿ ನೀಡಿದೆ. ಆದರೆ ಮಾಲೀಕರು ಬಿಬಿಎಂಪಿ ಅನುಮತಿ ಮರೆಮಾಚಿ 6 ಮಹಡಿ ಕಟ್ಟಡ ಕಟ್ಟುತ್ತಿದ್ದಾರೆ.
6ನೇ ಮಹಡಿ ಕಟ್ಟಡ ಕಟ್ಟಿರುವ ಮಾಲೀಕ, ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಕಟ್ಟಡ ನಿರ್ಮಾಣ ಮಾಡಿದ್ದಾನೆ. ಲಿಫ್ಟ್ ಗುಂಡಿಯಲ್ಲಿ ನೀರು ನಿಂತಿದ್ದರೂ ಕೇರ್ ಮಾಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ನಿರ್ಲಕ್ಷ್ಯದಿಂದಲೇ ಆಟವಾಡುತ್ತಿದ್ದ ಮಗು ಲಿಫ್ಟ್ಗೆ ತೋಡಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗಿದೆ.
ಈ ಕುರಿತು ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.