ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ಧಿಷ್ಟಾವದಿ ಮುಷ್ಕರ; ಕಚೇರಿಗಳು, ಶಾಲಾ ಕಾಲೇಜುಗಳು ಬಂದ್ | JANATA NEWS
ಬೆಂಗಳೂರು : ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಶುರುವಾಗಲಿದೆ. ಏಳನೇ ವೇತನ ಆಯೋಗ ಜಾರಿಯಾಗುವಂತೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅನಿರ್ದಿಷ್ಟಾವಧಿ ಹೋರಾಟ ನಾಳೆಯಿಂದಲೇ ಶುರುವಾಗಲಿದೆ. ಯಾವುದೇ ಗೊಂದಲವಿಲ್ಲದೇ ಮುಷ್ಕರ ಆರಂಭ ಆಗಲಿದೆ.
ಮುಷ್ಕರದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಯಾವಾಗ ಸಭೆಗೆ ಕರೆದರೂ ಭಾಗವಹಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಹೇಳಿದ್ದಾರೆ. ಅದರಂತೆ ನಾಳೆ (ಮಾರ್ಚ್ 1) ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು ಕಚೇರಿಗಳಿಗೆ ತೆರಳದೆ ಮುಷ್ಕರ ನಡೆಸಲಿದ್ದಾರೆ. ಅದರಂತೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಬಂದ್ ಆಗುವ ಸಾಧ್ಯತೆ ಇದೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಇರಲಿದ್ದು, ಉಳಿದಂತೆ ಯಾವುದೇ ಸೇವೆ ನೀಡದಿರಲು ನಿರ್ಧರಿಸಿದಂತಿದೆ.
ಫೆಬ್ರವರಿಯಲ್ಲಿ ತಕ್ಷಣ ಜಾರಿಯಾಗುತ್ತೆ ಅಂತಾ ಸಿಎಂ ಘೋಷಣೆ ಮಾಡಿದ್ದರು. ಆದ್ರೆ ಇದುವರೆಗೆ ಏಳನೇ ವೇತನ ಜಾರಿಯಾಗಿಲ್ಲ. ಒಂಬತ್ತು ತಿಂಗಳ ಕಾಲ ಈಗಾಗಲೇ ವಿಳಂಬವಾಗಿದೆ. ಕಡಿಮೆ ಸಂಬಳದಲ್ಲಿ ಸರ್ಕಾರಿ ನೌಕರರು ಕೆಲಸ ಮಾಡ್ತಿದ್ದಾರೆ. ಆದ್ರೆ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂದಿದೆ ಎಂದು ಹೇಳಿದ್ದಾರೆ.