Mon,May06,2024
ಕನ್ನಡ / English

ಹುಡುಗಿಯ ಜೊತೆಗೆ ಪಾರ್ಟಿ ಮಾಡಲು ಬಾರ್​ನಲ್ಲಿ ಲಾಂಗ್​ ಬೀಸಿದ ರೌಡಿಶೀಟರ್​​ಗಳು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ | JANATA NEWS

10 Mar 2023
1266

ಬೆಂಗಳೂರು : ಹುಡುಗಿಯ ಜೊತೆಗೆ ಪಾರ್ಟಿ ಮಾಡಲು ಬಾರ್​​ಗೆ ಬಂದು ಬಳಿಕ ಲಾಂಗ್​ ಬೀಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ.

ಬೇರೆಡೆ ಪಾರ್ಟಿ ಮಾಡಿ ಮದ್ಯ ಖಾಲಿ ಎಂದು ಎಂಆರ್​​​ಪಿ ಬಾರ್​​ಗೆ ಬಂದಿದ್ದವರಿಂದ ಗ್ಯಾಂಗ್ ವಾರ್​ ನಡೆಸಿದ್ದಾರೆ.

ಯುವತಿ ಸ್ಪಾನಲ್ಲಿ‌ ಕೆಲಸ ಮಾಡುತ್ತಿದ್ದು, ಗ್ಯಾಂಗ್ ಯುವತಿಯನ್ನ ಕರೆದುಕೊಂಡು ಪಾರ್ಟಿ ಮಾಡಲೆಂದು ಬಾರ್​ಗೆ ಬಂದಿದ್ದಾರೆ. ಈ ವೇಳೆ ಕಿರಿಕ್​ ನಡೆದಿದ್ದು, ಲಾಂಗ್ ಬೀಸಿ ರೌಡಿಶೀಟರ್ ಬೆದರಿಸಿದ್ದಾನೆ.

ಲಾಂಗ್ ಬೀಸಿರುವ ಅಸ್ಥಾಬ್ ಮತ್ತು ಯುವತಿ ಮೀಷೋ ಇಬ್ಬರೂ ಪ್ರೇಮಿಗಳಾಗಿದ್ದು ಇಬ್ಬರೂ ಉತ್ತರ ಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಯುವತಿ ಮೀಷೋ ಬರ್ತ್ ಡೇ ಹಿನ್ನಲೆ ಕೋರಮಂಗಲ ಬಳಿ ಪಾರ್ಟಿ ಮಾಡಿದ್ದರು. ಇವರ ಜತೆ ರೌಡಿಶೀಟರ್​ಗಳೂ ಪಾರ್ಟಿಗೆ ಹೋಗಿದ್ದರು.

ಬಾರ್​ನಲ್ಲಿ ದಾಂಧಲೆ ಮಾಡಿದ್ದ ಗ್ಯಾಂಗ್​ನಲ್ಲಿ ರೌಡಿ ಶೀಟರ್ ಸಂತೋಷ್@ ರೋಸಿ, ರಾಮಾಂಜಿ‌ ಮುಂತಾದವರು ಇದ್ದರು. ಪ್ರೇಮಿಗಳಿಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಎಣ್ಣೆ ಖಾಲಿಯಾಗಿತ್ತು. ಹೀಗಾಗಿ ನೀಲಾ ಬಾರ್​ಗೆ ಆರೋಪಿಗಳು ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಅವರು ಒಂದು ಕೇಸ್ ಬಿಯರ್ ಆರ್ಡರ್​ ಮಾಡಿದ್ದು ಈ ವೇಳೆ ಯುವತಿ ಮಿಷೋ ಅಡ್ಡ ನಿಂತಿದ್ದಳು.

ಆಗ 'ಸ್ವಲ್ಪ ಸೈಡ್​ಗೆ ಬನ್ನಿ' ಅಂದಿದಕ್ಕೆ ಕಿರಿಕ್ ಶುರುವಾಗಿದೆ. ಇದನ್ನು ತಪ್ಪಾಗಿ ಅರ್ಥಸಿಕೊಂಡ ಯುವತಿ ಬಾರ್ ನೌಕರರ ಮೇಲೆ ಗರಂ ಆಗಿದ್ದಾಳೆ. ಈ ವೇಳೆ ಬಾರ್​ನ ನೌಕರರು ಹಾಗೂ ಗ್ಯಾಂಗ್​ನ ನಡುವೆ ಜಗಳ ಉಂಟಾಗಿದ್ದು ಅಷ್ಟಕ್ಕೇ ನಶೆಯಲ್ಲಿದ್ದ ರೌಡಿಶೀಟರ್ ಸಂತೋಷ್ ಲಾಂಗ್ ತಂದು ಬಾರ್ ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದಾನೆ.

ಲಾಂಗ್ ಬೀಸಿ ಬಾರಿನಲ್ಲಿದ್ದ ವಸ್ತುಗಳನ್ನ ಸಂತೋಷ್ ಪುಡಿ ಮಾಡಿದ್ದಾನೆ. ಅಲ್ಲಿದ್ದ ಯಶ್ವಂತ್, ಪ್ರಸನ್ನ, ಮಂಜುನಾಥ್ ಎಂಬುವರ ಮೇಲೆ ಇ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಸದ್ಯಕ್ಕೆ ರೌಡಿಶೀಟರ್​ಗಳನ್ನ ಪೊಲೀಸರು ಬಂಧಿಸಿದ್ದಾರೆ.

RELATED TOPICS:
English summary :Rowdy-sheeters who went to a bar to party with a girl, the scene was caught on CCTV.

ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾಗೆ ಪೂಜೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಸೂಪರ್ಸಾನಿಕ್ ಮಿಸೈಲ್-ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ ಹಾರಾಟ-ಪರೀಕ್ಷೆ ಯಶಸ್ವಿ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ, ಕಾಂಗ್ರೆಸ್ ರಾಜ್ಯ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ? - ಅಮಿತ್ ಷಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ನಮ್ಮ ಮುಸ್ಲಿಂ ಜಾತಿ ಗಣತಿ ಪ್ರಸ್ತಾಪದಿಂದಾಗಿ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ - ಸಿಎಂ ಹಿಮಂತ ಶರ್ಮಾ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ಅಂಕೋಲಾ ಬಸ್ ನಿಲ್ದಾಣದ ಹಣ್ಣು ಮಾರಾಟಗಾರ್ತಿ ಮೋಹಿನಿ ಗೌಡ ಭೇಟಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ರಾಜರು, ಮಹಾರಾಜರು ಭೂಗಳ್ಳರು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ
ನೀವು ರಾಷ್ಟ್ರೀಯತೆಗಿಂತ ಹೆಚ್ಚು ಆದ್ಯತೆ ವೈಯಕ್ತಿಕ ಹಿತಾಸಕ್ತಿಗೆ ಇಟ್ಟುಕೊಂಡಿದ್ದೀರಿ - ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಖಂಡಿಸುತ್ತದೆ

ನ್ಯೂಸ್ MORE NEWS...