ಗುಲಾಮರಿಗೆ ಇಟಲಿ ಆಳ್ವಿಕೆಗೊಳಪಟ್ಟರೆ ತೊಂದ್ರೆ ಇಲ್ಲ, ಭಾರತೀಯ ಅಮುಲ್ ಮಾರಾಟ ಮಾಡಿದರೆ ತೊಂದ್ರೆ! | JANATA NEWS
ಬೆಂಗಳೂರು : ಅಮುಲ್ ಉತ್ಪನ್ನ ಕರ್ನಾಟಕದಲ್ಲಿ ಮಾರಾಟ ಮಾಡುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದು, ಗುಲಾಮರಿಗೆ ಇಟಲಿ ಆಳ್ವಿಕೆ ಓಕೆ ಆದರೆ, ಭಾರತೀಯ ಬ್ಯ್ರಾಂಡ್ ಬಳಸಲು ಸಮಸ್ಯೆ ಎಂದಿದ್ದಾರೆ.
ಅಮುಲ್ ಪರವಾಗಿ ಶನಿವಾರ ಟ್ವೀಟ್ ಮಾಡಿರುವ ಸಿ.ಟಿ ರವಿ ಅವರು , ಗುಲಾಮರಿಗೆ ಇಟಲಿಯನ್ನರಿಂದ ಆಳ್ವಿಕೆಗೊಳಪಡುವುದರಲ್ಲಿ ಯಾವ ತೊಂದರೆಯೂ ಇಲ್ಲ, ಆದರೆ, ಭಾರತೀಯ ಬ್ಯಾಂಡ್ ಆದ ಅಮುಲ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದು ತೊಂದರೆಯಾಗುತ್ತದೆ. ಇದು ಎಂತಹ ಸೋತವರ ಗುಂಪು'' ಎಂದಿದ್ದಾರೆ. ಈ ಮೂಲಕ ಸಿಟಿ ರವಿ ಅಮುಲ್ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.
ಅಮುಲ್ ಉತ್ಪನ್ನ ಲಗ್ಗೆ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಡಿರುವ ಟ್ವೀಟ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ನಂದಿನಿಯನ್ನು ಅಮೂಲ್ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ. ಮೊಸರಿಗೆ ದಹಿ ಎಂದರೂ ಸಮರ್ಥನೆ ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ. ಹಿಂದಿ ಹೇರಿಕೆಗೂ ಸಮರ್ಥನೆ. ಸಿಟಿ ರವಿ ಅವರೇ, ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
◆ನಂದಿನಿಯನ್ನು ಅಮೂಲ್ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ.
— Karnataka Congress (@INCKarnataka) April 8, 2023
◆ಮೊಸರಿಗೆ ದಹಿ ಎಂದರೂ ಸಮರ್ಥನೆ
◆ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ
◆ಹಿಂದಿ ಹೇರಿಕೆಗೂ ಸಮರ್ಥನೆ.@CTRavi_BJP,
ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ.#ಕರ್ನಾಟಕವಿರೋಧಿಬಿಜೆಪಿ pic.twitter.com/YTuJVx8A8w