ಶೆಟ್ಟರ್ಗೆ ಪಕ್ಷ ಯಾವ ಅನ್ಯಾಯ ಮಾಡಿದೆ? ಬಿಜೆಪಿ ಪಕ್ಷ ಬಿಟ್ಟವರ ಬಂಡವಾಳ ಬಯಲು ಮಾಡ್ತೀನಿ! | JANATA NEWS
ಬೆಂಗಳೂರು : ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಬಿಟ್ಟವರ ಬಂಡವಾಳ ಬಯಲು ಮಾಡ್ತೀನಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶೆಟ್ಟರ್ ಅವರು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದರು, ಜನರು ಇದನ್ನು ಕ್ಷಮಿಸಲ್ಲ, ಹಳೆ ಬೇರು, ಹೊಸ ಚಿಗುರು ಸೇರಿ ಈ ದೊಡ್ಡ ಪಕ್ಷವನ್ನು ಬೆಳೆಸಬೇಕಿದೆ. ನನಗೆ, ಶೆಟ್ಟರ್ಗೆ, ಸವದಿಗೆ ಹಾಗೂ ಈಶ್ವರಪ್ಪಗೆ ಎಲ್ಲರಿಗು ಎಲ್ಲ ಅವಕಾಶವನ್ನು ಪಕ್ಷ ಕೊಟ್ಟಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ರಾಜ್ಯದ ಉದ್ದಗಲಕ್ಕೆ ಎಲ್ಲೇ ಹೋದರೂ ಪ್ರೀತಿ ಗಳಿಸುವುದಕ್ಕೆ ಬಿಜೆಪಿ ಕಾರಣ ಎಂದು ಬಿಎಸ್ವೈ ಹೇಳಿದರು.
ಸವದಿ ಅವರು ಚುನಾವಣೆಯಲ್ಲಿ ಸೋತ ಮೇಲೆಯೂ ಅವರನ್ನು ಎಂಎಲ್ಸಿ ಮಾಡಿ, ಉಪಮುಖ್ಯಮಂತ್ರಿ ಮಾಡಿ ಕೋರ್ ಕಮಿಟಿ ಸದಸ್ಯ ಮಾಡಿದೆವು. ನಾವು ಅವರಿಗೆ ಏನು ಕಡಿಮೆ ಮಾಡಿದ್ವಿ? 10 ತಿಂಗಳು ಆಗಿದೆ. ಎಂಎಲ್ಸಿ ಆಗಿ ಮುಂದುವರಿಯಬಹುದಿತ್ತು. ಮತ್ತೊಮ್ಮೆ ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಅವರ ಬೆಂಬಲಿಗರನ್ನು ಕೇಳುತ್ತೇನೆ. ಇದು ಜನರಿಗೆ ಮಾಡಿದ ದ್ರೋಹ. ನಂಬಿಕೆ ದ್ರೋಹ ಮತ್ತು ವಿಶ್ವಾಸ ದ್ರೋಹ ಎಂದು ಅಸಮಾಧಾನ ಹೊರಹಾಕಿದರು.
ಒಂದು ವೇಳೆ ಶೆಟ್ಟರ್ ಅವರಿಗೆ ತಪ್ಪು ಅರಿವಾಗಿ ಮತ್ತೆ ಬಿಜೆಪಿಗೆ ಬಂದರೆ ಸ್ವಾಗತ , ಜಗದೀಶ ಶೆಟ್ಟರ್ ಅವರು ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿದ್ದವರು. ಶೆಟ್ಟರ್ ಅವರನ್ನ ವಿರೋಧ ಪಕ್ಷದ ನಾಯಕರನ್ನಾಗಿ ಮತ್ತು ಸಿಎಂ ಆಗಿ ಮಾಡಿದೆವು. ಪಕ್ಷದ ಸಹಕಾರ ಇಲ್ಲದಿದ್ದರೆ ವ್ಯಕ್ತಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಯಾರೂ ಕೂಡ ಅವರನ್ನು ಕ್ಷಮಿಸಲ್ಲ ಎಂದರು.
ನನಗೆ 80 ವರ್ಷ ಆದರೂ ಸಹ ಹೋರಾಟ ಮಾಡ್ತಿರೋದು ದೇಶದ ಬಲಿಷ್ಠ ಸರ್ಕಾರಕ್ಕಾಗಿ. ಜಗತ್ತಿನ ಯಾವುದೇ ಶಕ್ತಿ ಕೂಡ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದನ್ನ ತಡೆ ಯೋಕೆ ಸಾಧ್ಯವಿಲ್ಲ. ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಹೊಸ ಪ್ರಯೋಗ ಮಾಡಿದೆ. ಹೀಗಾಗಿ ಟಿಕೆಟ್ ವಂಚಿತ ನಾಯಕರು ಬಿಜೆಪಿಯ ಋಣ ತೀರಿಸುವ ಕೆಲಸ ಮಾಡಬೇಕು. ನಾನಿನ್ನೂ ಗಟ್ಟಿ ಇದ್ದೇನೆ. ರಾಜ್ಯಾದ್ಯಂತ ಓಡಾಡಿ ಇವರ ಬಣ್ಣ ಬಯಲು ಮಾಡ್ತೀನಿ ಎಂದು ಎಚ್ಚರಿಸಿದರು. ಕಾರ್ಯಕರ್ತರು ನಮ್ಮ ಜತೆ ಇದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತೀವಿ ಎಂದುರು.
ಪಕ್ಷ ಬಿಟ್ಟವರು ಮತ್ತೆ ಬಿಜೆಪಿ ಕದ ತಟ್ಟಿದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಮತ್ತೆ ಅದೇ ಸ್ಥಾನಮಾನ ಗೌರವದೊಂದಿಗೆ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇನೆ. ನಾನು ಸ್ವಾಗತ ಬಯಸುತ್ತೇನೆ ಎಂದರು. ಶೆಟ್ಟರ್ ಕಾಂಗ್ರೆಸ್ ಹೋಗ್ತಿದ್ದಾರೆ. ಪಕ್ಷ ಅವರಿಗೆ ಯಾವ ಅನ್ಯಾಯವೂ ಮಾಡಿಲ್ಲ. ನಿವೃತ್ತಿಯಾಗಿ ಅಂತ ಶೆಟ್ಟರ್ ಅವರಿಗೆ ಯಾರೂ ಹೇಳಿಲ್ಲ. ಯಾರೇ ಪಕ್ಷ ಬಿಟ್ರೂ ನಮಗೆ ಸಮಸ್ಯೆ ಆಗಲ್ಲ ಎಂದು ಬಿಎಸ್ವೈ ತಿಳಿಸಿದರು.