ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್, ಕಳೆದ ಬಾರಿಗಿಂತ 495 ಕೋಟಿ ರೂ. ಆಸ್ತಿ ಹೆಚ್ಚಳ! | JANATA NEWS
ಹೊಸಕೋಟೆ : ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ಹೊಸಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರ್ಯಾಲಿ ನಡೆಸಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
2019ರ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ 1195 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದರು. ಅದಕ್ಕೂ ಮುನ್ನ 2018ರ ಚುನಾವಣೆಯಲ್ಲಿ 1,015 ಕೋಟಿ ರೂ. ಆಸ್ತಿಯನ್ನು ಎಂಟಿಬಿ ಸಲ್ಲಿಸಿದ್ದರು.
2020ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ವೇಳೆ 1224 ಕೋಟಿ ರೂ. ಆಸ್ತಿಯನ್ನು ಎಂಟಿಬಿ ಘೋಷಿಸಿದ್ದರು. ಈಗ 1510 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಎಂಟಿಬಿ ಘೋಷಿಸಿದ್ದು, ಮೂರು ವರ್ಷದಲ್ಲಿ ಬರೋಬ್ಬರಿ 286 ಕೋಟಿ ರೂ. ಆಸ್ತಿ ಹೆಚ್ಚಾಗಿದೆ.
ಎಂಟಿಬಿ ನಾಗರಾಜ್ ವಿವಿಧ ಬ್ಯಾಂಕ್ಗಳಲ್ಲಿ 29.12 ಕೋಟಿ ರೂ. ಉಳಿತಾಯ ಹೊಂದಿದ್ದು, 33.08 ಕೋಟಿ ರೂ. ನಿಶ್ಚಿತ ಠೇವಣಿ ಹೊಂದಿದ್ದಾರೆ. ಎಂಟಿಬಿ ಎಸ್ಟೇಟ್ಸ್ ಮತ್ತು ಪ್ರಾಪರ್ಟಿಸ್ನಲ್ಲಿ 196.54 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಶಬರಿ ಎಂಟರ್ಪ್ರೈಸಸ್ನಲ್ಲಿ 2.81 ಕೋಟಿ ರೂ. ಹೂಡಿಕೆ, ಎಂಟಿಬಿ ಪ್ರಾಪರ್ಟಿಸ್ ಪ್ರೈವೆಟ್ ಲಿಮಿಟೆಡ್ನಲ್ಲಿ 20,000 ರೂ. ಇಕ್ವಿಟಿ ಷೇರುಗಳನ್ನು ಹೊಂದಿದ್ದು, ಎಂಟಿಬಿ ಶುಭಮೇರು ಕನ್ವೆನ್ಷನ್ ಹಾಲ್ನಲ್ಲಿ 5.54 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 105 ಕೋಟಿ ರೂ. ಸಾಲ ನೀಡಿದ್ದಾರೆ.
38.88 ಲಕ್ಷ ರೂ. ಮೌಲ್ಯದ 996 ಗ್ರಾಂ ಚಿನ್ನ ಹೊಂದಿದ್ದಾರೆ. 98.93 ಲಕ್ಷ ರೂ. ಮೌಲ್ಯದ ವಜ್ರಗಳಿವೆ. 2.21 ಲಕ್ಷ ರೂ. ಮೌಲ್ಯದ ಪ್ಲಾಟಿನಂ ಒಡವೆ ಇದ್ದು, 214.5 ಕೆಜಿ ಬೆಳ್ಳಿ ಉತ್ಪನ್ನಗಳನ್ನು ಹೊಂದಿದ್ದಾರೆ. ಈ ಮೂಲಕ ಒಟ್ಟು 372.42 ಕೋಟಿ ಚರಾಸ್ತಿಯನ್ನು ಎಂಟಿಬಿ ನಾಗರಾಜ್ ಹೊಂದಿದ್ದಾರೆ. ಇನ್ನೂ, ಎಂಟಿಬಿ ನಾಗರಾಜ್ ಅವರ ಹೆಸರಲ್ಲಿ 49 ಎಕರೆ 8 ಗುಂಟೆ ಕೃಷಿ ಭೂಮಿ ಕೂಡ ಇದ್ದು, 71.01 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.
ಎಂಟಿಬಿ ನಾಗರಾಜ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಬದಲುನ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಕೋರಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಬಿಜೆಪಿ ಹೈಕಮಾಂಡ್ ನಾಗರಾಜು ಅವರಿಗೆ ಟಿಕೆಟ್ ನೀಡಿದೆ. 2004ರಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ಬಂದು ತಾಲೂಕಿನ ಜನರ ಸೇವೆಯನ್ನು 19 ವರ್ಷ ಮಾಡಿದ್ದೇನೆ. ಈಗ ರಾಜಕೀಯ ನಿವೃತ್ತಿ ಪಡೆದು, ಮಗ ಜನಸೇವೆಗೆ ಮುಂದಾಗಲಿ ಎಂದು ಬಯಸಿ ಟಿಕೆಟ್ ಬೇಡ ಎಂದು ಪತ್ರ ಬರೆದಿದ್ದೆ ಎಂದು ಎಂಟಿಬಿ ನಾಗರಾಜ್ ಹೇಳಿಕೊಂಡಿದ್ದರು.