ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಫೈಟ್ ಇರ್ತಿತ್ತು! | JANATA NEWS
ಬೆಂಗಳೂರು : ಕನಕಪುರದಲ್ಲಿ ಡಿಕೆ ಶಿವಕುಮಾರ್ ಜೊತೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿರುವುದಕ್ಕೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪ್ರತಿಕ್ರಿಯಿಸಿ, ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು ಎಂದಿದ್ದಾರೆ.
ಕಳೆದ ಎರಡು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮ, ಹವನ ಮಾಡುತ್ತಿದ್ದಾರೆ. ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ. ಬಹುಶ: ಸುರೇಶ್ ಅವರನ್ನು ತಮ್ಮ ಕ್ಷೇತ್ರದಲ್ಲಿ ನಿಲ್ಲಿಸಲು ಜ್ಯೋತಿಷಿಗಳು ಹೇಳಿರಬಹುದು. ಅದಕ್ಕಾಗಿ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್ರನ್ನು ಕನಕಪುರದಲ್ಲಿ ನಿಲ್ಲಿಸಿದ್ದಾರೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಫೈಟ್ ಇರ್ತಿತ್ತು. ಕನಕಪುರದಲ್ಲಿ ಸುರೇಶ್ ಆದರೇನು ಡಿಕೆಶಿ ಆದರೇನು, ಎಲ್ಲಾರೂ ಒಂದೇ ಎಂದು ಹೇಳಿದ್ದಾರೆ.ಯಾವುದೇ ತಂತ್ರ, ಕುತಂತ್ರ ನನಗೆ ಗೊತ್ತಿಲ್ಲ. ಎಂದು ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ.