ಸಿದ್ದರಾಮಯ್ಯರನ್ನ ನೋಡಿದ್ರೆ ನಗು ಬರುತ್ತೆ, 18 ತುಂಬದ ಮೊಮ್ಮಗನ ಜತೆ ಪ್ರಚಾರಕ್ಕೆ ಬರುತ್ತಿದ್ದಾರೆ | JANATA NEWS
ಮೈಸೂರು : ವರುಣಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಯ, ಪುಕ್ಕಲುತನ ಕಾಡ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಇವರು ಮೊಮ್ಮಗನನ್ನು ಕರೆದುಕೊಂಡು ಬಂದು ಪೂಜೆ ಹಾಗೂ ಪುನಸ್ಕಾರ ಮಾಡಿ, ಸೆಂಟಿಮೆಂಟಲ್ ಆಗಿ ಮತ ಕೇಳುತ್ತಿದ್ದಾರೆ. ಭಯ ಹಾಗೂ ಪುಕ್ಕಲುತನಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ. ನೀವು ಎಲ್ಲರನ್ನೂ ಕುಟುಂಬ ರಾಜಕಾರಣ ಎಂದು ಟೀಕೆ ಮಾಡುತ್ತೀರಿ. ಆದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಇನ್ನೂ 18 ವರ್ಷದ ತುಂಬದ ಮೊಮ್ಮಗನನ್ನೇ ಉತ್ತರಾಧಿಕಾರಿ ಎಂದು ಬಿಂಬಿಸುವ ನೀವು ಕಾಂಗ್ರೆಸ್ ಹೋದ ಮೇಲೆ ನಿಮ್ಮ ಸಿದ್ಧಾಂತ ಎಲ್ಲಿ ಹೋಯಿತು ಎಂದು ಟೀಕಿಸಿದರು.
ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು?. ಕಾಂಗ್ರೆಸ್ಗೆ ಹೋದ ಮೇಲೆ ನಿಮ್ಮ ಸಿದ್ದಾಂತ, ನೈತಿಕತೆಯನ್ನ ಕಾಂಗ್ರೆಸ್ ಗೆ ಅಡವಿಟ್ಟರಾ…? ಎಂದು ಪ್ರಶ್ನಿಸುವ ಮೂಲಕವಾಗಿ ವಾಗ್ದಾಳಿ ಮಾಡಿದ್ದಾರೆ.