ಸಾಯುತ್ತೇನೆ ಎಂದು ನೇಣಿನ ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡಿದ್ದ ಪ್ರೇಯಸಿ, ಹಗ್ಗ ಎಳೆದು ಚೇರ್ ಒದ್ದ ಪ್ರಿಯತಮ! | JANATA NEWS
ಬೆಂಗಳೂರು : ಸಾಯುತ್ತೇನೆ ಎಂದು ನೇಣಿನ ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡಿದ್ದ ಪ್ರೇಯಸಿ, ಪ್ರಿಯತಮ ಹಗ್ಗ ಎಳೆದು ಚೇರ್ ಒದ್ದ ಪರಿಣಾಮ ಹಗ್ಗ ಕೊರಳಿಗೆ ಬಿಗಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವೇಶ್ವರ ನಗರದ ಜೆ.ಸಿ ನಗರ ಬಳಿ ನಡೆದಿದೆ.
ಈ ಸಂಬಂಧ ಗಣೇಶ್(22) ಎಂಬಾತನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಶ್ರಾವಣ (35) ಮೃತ ಮಹಿಳೆ. ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಹೀಗಿದ್ದೂ ಈಕೆ ಗಣೇಶ್ (22) ಎಂಬ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಮೃತ ಸರಗುಣಂ ಈಗಾಗಲೇ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ಕಳೆದ ನಾಲ್ಕು ವರ್ಷದ ಹಿಂದೆ ಬಸವೇಶ್ವರ ನಗರ ಬಳಿಯ ಎಂಜಿ ನಗರದಲ್ಲಿ ವಾಸವಿದ್ದಾಗ ಸರಗುಣಗೆ ಆಟೋ ಚಾಲಕನಾಗಿದ್ದ ಗಣೇಶ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಜೊತೆಗೆ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು.
ಶ್ರಾವಣ 50 ಸಾವಿರ ಹಣವನ್ನು ಯುವಕನಿಗೆ ನೀಡಿ ಮನೆ ಮಾಡಿಕೊಟ್ಟಿದ್ದಳು. ಆದರೆ ಗಣೇಶ್ ಬೇರೆ ಮಹಿಳೆ ಜತೆ ಸಲುಗೆ ಬೆಳೆಸಿಕೊಂಡಿದ್ದ. ಇದು ತಿಳಿಯುತ್ತಿದ್ದಂತೆ ಯುವಕನನ್ನು ಮನೆಗೆ ಕರೆಸಿಕೊಂಡಿದ್ದಳು. ಆ ಮಹಿಳೆ ಯಾರೆಂದು ಗಲಾಟೆ ಮಾಡಿದ್ದಾಳೆ. ಮನೆ ಮಾಡಿಕೊಟ್ಟು ಹಣ ಕೊಟ್ಟಿದ್ದೆನೆಲ್ಲ ಎಲ್ಲ ವಾಪಸ್ ಕೊಡು ಎಂದಿದ್ದಾಳೆ ಎನ್ನಲಾಗಿದೆ.
ಈಕೆಯ ಮಾತಿನಿಂದ ರೋಸಿಹೋಗಿದ್ದ ಗಣೇಶ್, ತಾನು ಸಾಯುವುದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಇದೇ ವೇಳೆ ಸರಗುಣಂ, ನಾನು ಸಾಯ್ತೀನಿ ಎಂದು ಗಣೇಶ್ ಹಾಕಿದ್ದ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾಳೆ. ಈ ವೇಳೆ ಇದೇ ಸರಿಯಾದ ಸಮಯ ಎಂದುಕೊಂಡ ಗಣೇಶ್ ಕುಣಿಕೆ ಹಾಕಿಕೊಳ್ಳಲು ಹತ್ತಿದ್ದ ಕುರ್ಚಿಯನ್ನು ಎಳೆದಿದ್ದಾನೆ. ಈ ವೇಳೆ ಸರಗುಣಂ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈ ಬಗ್ಗೆ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.