ಜಿ. ಪರಮೇಶ್ವರ್ ಮೇಲೆ ಕಲ್ಲೆಸೆತ ಪ್ರಕರಣ, ಹೂವುಗಳಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿದ್ರು! | JANATA NEWS
ತುಮಕೂರು : ಜಿ. ಪರಮೇಶ್ವರ್ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ಕುರಿತಂತೆ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ನಮ್ಮ ಕಾರ್ಯಕರ್ತರು ಬೇಡ ಎಂದರು ಮೇಲಕ್ಕೆತ್ತಿದ್ದರು, ಜೆಸಿಬಿ ಮೂಲಕ ಹೂ ಹಾಕಲು ರೆಡಿಮಾಡಿಕೊಂಡಿದ್ದರು. ಕೂಡಲೇ ತಲೆಗೆ ಏನೋ ಬಡಿದಂತಾಯಿತು. ತಲೆಗೆ ಕಲ್ಲು ಬೀಳುತ್ತಿದ್ದಂತೆ ಜೋರಾಗಿ ಕೂಗಿದೆ. ಕೂಡಲೇ ನಮ್ಮ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದರು ಎಂದರು.
ಜಿ. ಪರಮೇಶ್ವರ್ ಅವರು ಗೆಲ್ಲುವುದು ಖಚಿತ, ಹೀಗಾಗಿ ಕಲ್ಲು ಎಸೆತದಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಪರಮೇಶ್ವರ್ ಆಪ್ತರು ಆರೋಪ ಮಾಡಿದ್ದಾರೆ. ಅವರಿಗೆ ಒಂದಲ್ಲ ಎರಡು ಬಾರಿ ಕಲ್ಲು ಎಸೆತವಾಗಿದೆ. ಮೊದಲ ಬಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪರಮೇಶ್ವರ್ ಪಾರಾಗಿದ್ದರು. ಎರಡನೇ ಬಾರಿ ನಡೆದ ದಾಳಿಯಲ್ಲಿ ಪರಮೇಶ್ವರ್ಗೆ ಕಲ್ಲೇಟು ಬಿದ್ದಿದೆ ಆರೋಪಿಸಿದ್ದಾರೆ.
ಜಿ. ಪರಮೇಶ್ವರ್ ತಗುಲಿದ ಕಲ್ಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೂ ಚೆಲ್ಲಲು ತಂದಿದ್ದ ಜೆಸಿಬಿಯಲ್ಲೇ ಬಂತಾ ಕಲ್ಲು? ಇಲ್ಲ ವಿರೋಧಿಗಳು ಏನಾದ್ರು ಹೂ ಹಾಕುವುದನ್ನೇ ಕಾದು ಪರಂ ಕಡೆಗೆ ಕಲ್ಲು ಬಿಸಿದ್ರಾ? ಎಂಬ ಎರಡು ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಿ. ಪರಮೇಶ್ವರ್ ಮಾತನಾಡಿ ಹೂವುಗಳಲ್ಲಿ ದುಷ್ಕರ್ಮಿಗಳು ಕಲ್ಲು ಹಾಕಿದ್ದರು ಎಂದನಿಸುತ್ತದೆ. ನನಗೆ ಶತ್ರುಗಳು ಕಡಿಮೆ ಇದೆ ಎಂದು ತಿಳಿದಿದ್ದೆ, ಈ ಬಗ್ಗೆ ತನಿಖೆ ಮಾಡಲು ಎಸ್ ಪಿ ಗೆ ಹೇಳಿದ್ದೇನೆ. 1999 ರಲ್ಲಿ ನನಗೆ ಚಾಕುವಿನಿಂದ ತಿವಿಯಲು ಮುಂದಾಗಿದ್ದರು. ಪದೇ ಪದೇ ಇಂತಹ ಘಟನೆ ಸಂಭವಿಸುತ್ತಿದೆ. ತಲೆಗೆ ಒಂದೂವರೆ ಇಂಚು ಗಾಯವಾಗಿದೆ, ವೈದ್ಯರ ಜೊತೆ ಚರ್ಚಿಸಿ ಚುನಾವಣಾ ಪ್ರಚಾರಕ್ಕೆ ಹೋಗುವ ಬಗ್ಗೆ ನಿರ್ಧರಿಸುತ್ತೇನೆ. ನಾನು ಯಾವುದಕ್ಕೂ ಹೆದರಲ್ಲ ಎಂದರು.