ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ ಮಾಡುವ ಗುರಿ ನಮ್ಮದು | JANATA NEWS
ಬೆಂಗಳೂರು : ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಮತದಾರರಿಗೆ ಹಲವು ಭರವಸೆಗಳನ್ನು ನೀಡಿರುವ ಕಮಲ ನಾಯಕರು ಪ್ರತಿಪಕ್ಷಗಳ ಚುನಾವಣಾ ತಂತ್ರಗಾರಿಕೆಗೆ ಸೆಡ್ಡು ಹೊಡೆಯೋ ರಣತಂತ್ರ ಹೆಣೆದಿದ್ದಾರೆ.
ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರಜಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಜನರಿಂದ ಜನರಿಗೋಸ್ಕರ ಇರುವ ಪ್ರಜಾ ಪ್ರಣಾಳಿಕೆ ಇದಾಗಿದೆ. ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ (ವೈಬ್ರಂಟ್ ಸ್ಟೇಟ್) ಮಾಡುವ ಗುರಿ ನಮ್ಮದು. ಪ್ರಧಾನ ಮಂತ್ರಿ ಯ ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಗುರಿ ಮುಟ್ಟಲು ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದು ಜನರ ಜನಪರ ಪ್ರಣಾಳಿಕೆ ಇದಕ್ಕೆ ಕರ್ನಾಟಕದ ಜನರು ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎನ್ನುವ ವಿಶ್ವಾಸ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷ ಕೂಡ ಇಂದು ಉಚಿತ ಸಿಲಿಂಡರ್ ನೀಡುವ ಯೋಜನೆಯನ್ನ ಘೋಷಿಸಿದೆ. ಬಿಜೆಪಿ ಪಕ್ಷ BPL ಕಾರ್ಡ್ದಾರರಿಗೆ ವರ್ಷಕ್ಕೆ 3 ಸಿಲಿಂಡರ್ ನೀಡುವ ಭರವಸೆ ನೀಡಿದೆ. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ 3 ಅಡುಗೆ ಸಿಲಿಂಡರ್ಗಳನ್ನು ಉಚಿತವಾಗಿ ನೀಡುವ ಭರವಸೆ ನೀಡಲಾಗಿದೆ.
ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುತ್ತೇವೆ.
ರಾಜ್ಯದಾದ್ಯಂತ ನಿವೇಶನ ರಹಿತ ವಸತಿ ರಹಿತ ನಿವಾಸಿಗಳಿಗೆ, "ಸರ್ವರಿಗೂ ಸೂರು ಯೋಜನೆ”ಯಡಿ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.
ಒನಕೆ ಓಬವ ಸಾಮಾಜಿಕ ನ್ಯಾಯ ನಿಧಿ" ಯೋಜನೆಯನ್ನು ಪ್ರಾರಂಭಿಸುತ್ತೇನೆ ಈ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ 210 ಸಾವಿರದವರೆಗೆ ತಾಳೆಯಾಗುವ ಠೇವಣಿ ನೀಡುತ್ತೇವೆ.
ಬೆಂಗಳೂರಿನ ಅಪಾರ್ಟ್ ಮೆಂಟ್ಗಳಲ್ಲಿ ‘ಸುಲಲಿತ ಜೀವನ’ಕ್ಕೆ ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುತ್ತೇವೆ ಹಾಗೂ ಕಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತೇವೆ.
ಗುಣಮಟ್ಟದ ಶಿಕ್ಷಣಕ್ಕೆ ಬಜೆಟ್ನಲ್ಲಿ ಶಿಕ್ಷಣ ಅನುದಾನ 3 ಪಟ್ಟು ಹೆಚ್ಚಳ
ಪ್ರತಿ ಮಗು ಅಕ್ಷರ, ಸರಳ ಗಣಿತ ಕಲಿಯಲು 'ಪ್ರಿ-ಕ್ಷಣ ಮಿಷನ್' ಪ್ರಾರಂಭ
ಅಂಗನವಾಡಿ ಕಾರ್ಯಕರ್ತರು ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳಾಗಿ ಪರಿಗಣನೆ
ಪ್ರತಿ ಜಿಲ್ಲೆಯಲ್ಲೂ ಐಐಟಿ ಮಾದರಿಯಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ
ವಿಶ್ವ ದರ್ಜೆಯ ಮಲ್ಟಿ-ಮೋಡೆಲ್ ಟ್ರಾನ್ಸ್ಪೋರ್ಟ್ ಹಬ್ 'ಕಾನ್ಕಾರ್ಡ್ ಬೆಂಗಳೂರು' ಸ್ಥಾಪಿಸುವ ಭರವಸೆ.
ಬೆಂಗಳೂರು ಏಕೀಕೃತ ಟ್ರಾನ್ಸಿಟ್ ನೆಟ್ವರ್ಕ್.
'ಮೈ ಬೆಂಗಳೂರು ಮೈ ರೂಟ್' ಎಂಬ ಇಂಟಿಗ್ರೇಟೆಡ್ ಡಿಕೆಟ್ ಬುಕ್ಕಿಂಗ್ ಅಪ್ಕಿಕೇಶನ್ ಪ್ರಾರಂಭಿಸುವ ಭರವಸೆ. ಇದು ವಿವಿಧ ಸಾರಿಗೆ ವ್ಯವಸ್ಥೆಯ ಏಕೀಕೃತ ಬುಕ್ಕಿಂಗ್ ಅಪ್ಲಿಕೇಶನ್ನಂತೆ ಕಾರ್ಯ ನಿರ್ವಹಿಸಲಿದೆ.
'ಒನ್ ಸಿಟಿ ಒನ್ ಕಾರ್ಟ್' ಎಂಬ ಯುನಿವರ್ಸಲ್ ಕಾರ್ಡ್
ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ, ಗೊರಗುಂಟೆ ಪಾಳ್ಯ, ಮೇಖ್ರಿ ಸರ್ಕಲ್, ಸರ್ಜಾಪುರ ಮತ್ತು ಇತರ ಪ್ರದೇಶಗಳಲ್ಲಿ ಸಂಚಾರ ದಟ್ಟನೆ ನಿಭಾಯಿಸಲು ಕೃತಕ ಬುದ್ಧಿಮತ್ತೆ ಚಾಲಿತ ಪರಿಹಾರ ಸಂಯೋಜಿಸುವ ಸಮಗ್ರ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಜೊತೆಗೆ ಸ್ಮಾರ್ಟ್ ಪಾರ್ಕಿಂಗ್ ಪರಿಹಾರ ಮತ್ತು ಸುರಕ್ಷಿತ ಸಂಚಾರ
'ಯುವ ಕರನಾಡು ಡಿಜಿಟಲ್ 4.0'- ಕರ್ನಾಟಕದ ಮೊದಲ ಗ್ಲೋಬಲ್ ಇನ್ನೋವೇಶನ್ ಹಬ್
'ಯುವಗುರು ಡಿಜಿಟಲ್ 4.0'- ಬೆಂಗಳೂರಿನಲ್ಲಿ ಅತ್ಯಾಧುನಿಕ ಇನ್ಕ್ಯುಬೇಟರ್ ಕೇಂದ್ರಗಳ ಸ್ಥಾಒಇಸುವ ಜೊತೆಗೆ ಖಾಸಗಿ
ಇನ್ಕ್ಯುಬೇಟರ್ ಮತ್ತು ವೇಗವರ್ಧಕಗಳನ್ನು ಸ್ಥಾಪಿಸಲು ಯುವಗುರು ಡಿಜಿಟಲ್ 4.0 ಯೋಜನೆ
‘ವಿಶ್ವೇಶ್ವರಯ್ಯ ವಿದ್ಯಾ ಯೋಜನೆ’ ಇದರಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.
ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ‘ಆಟಲ್ ಆಹಾರ ಕೇಂದ್ರ’ ವನ್ನು ಸ್ಥಾಪಿಸುತ್ತೇವೆ.
“ಪೋಷಣೆ” ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀಅನ್ನ ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ.