ಗೆಲುವಿನತ್ತ ಕಾಂಗ್ರೆಸ್ ದಾಪುಗಾಲು: ಕಾಂಗ್ರೆಸ್ ನಿಂದ ರೆಸಾರ್ಟ್ ಬುಕ್ | JANATA NEWS
ಬೆಂಗಳೂರು : ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದೆ.
ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ದಾಟಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರಲ್ಲಿದ್ದು, ಒಂದೊಮ್ಮೆ ಸ್ವಲ್ಪ ಅತ್ತ ಇತ್ತ ಕಡೆಯಾದರೂ ತಮ್ಮ ಪಕ್ಷದ ಶಾಸಕರುಗಳು 'ಆಪರೇಷನ್ ಕಮಲ' ಕ್ಕೆ ಒಳಗಾಗಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಹೀಗಾಗಿಯೇ ಬೆಂಗಳೂರಿನಲ್ಲಿ ಶಾಂಗ್ರಿಲಾ ಹಾಗೂ ಎಂಬೆಸ್ಸಿ ಹಿಲ್ಟನ್ ಹೋಟೆಲ್ ಗಳಲ್ಲಿ ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನಲಾಗಿದ್ದು, ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆ ಭಾವಿ ಶಾಸಕರುಗಳನ್ನು ಕರೆತಂದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಶನಿವಾರ ರಾತ್ರಿಯೇ ಶಾಸಕಾಂಗ ಸಭೆ ನಡೆಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ರಾತ್ರಿ 8 ಗಂಟೆಗೆ ಕೆಜೆ ಜಾರ್ಜ್ಗೆ ಸೇರಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಸಭೆ ನಡೆಸಲು ಸಮಯ ನಿಗದಿಪಡಿಸಲಾಗಿದೆ.
ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್ನತ್ತ ಮುಖ ಮಾಡಿದ್ದು ಸರ್ಕಾರ ರಚನೆಯ ಕಸರತ್ತು ಆರಂಭಿಸಲಿದ್ದಾರೆ.
ಇನ್ನು ಆಪರೇಷನ್ ಕಮಲದ ಭೀತಿ ಕೂಡ ಎದುರಾಗಿದ್ದು, ಎಲ್ಲಾ ಶಾಸಕರನ್ನು ಹೊರ ರಾಜ್ಯಕ್ಕೆ ಶಿಫ್ಟ್ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.