ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು! ಡಿಕೆ ಶಿವಕುಮಾರ್ಗೆ ಹೊಟ್ಟೆನೋವು, ಜ್ವರ | JANATA NEWS
ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ತನ್ನನ್ನು ಆಯ್ಕೆಮಾಡಿ ದೆಹಲಿಗೆ ಕರೆಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಇದರ ನಡುವೆ ಇಂದು ದೆಹಲಿಗೆ ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಟ್ಟೆ ನೋವಿನ ಕಾರಣ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ತನ್ನನ್ನು ಆಯ್ಕೆಮಾಡಿ ದೆಹಲಿಗೆ ಕರೆಸಿದೆ. ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದ್ದಾರೆ, ಸ್ವಲ್ಪ ಸಮಯದ ನಂತರ ತಾನು ಹೋಗುವುದಾಗಿ ಶಿವಕುಮಾರ್ ಹೇಳಿದರು.
ನನಗೆ ಹೊಟ್ಟೆ ಸಮಸ್ಯೆ ಆಗಿದೆ. ಡಾಕ್ಟರ್ ಒಂದು 10 ನಿಮಷ ಬರುತ್ತೇನೆ ಎಂದು ಹೇಳಿದ್ದಾರೆ. ಸ್ವಲ್ಪ ಜ್ವರ ಕೂಡ ಬಂದಿದೆ. ಸ್ವಲ್ಪ ನನ್ನನ್ನೂ ಫ್ರೀ ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಪೂಜೆ ಪುರಸ್ಕಾರ ಮಾಡಬೇಕಿದೆ. ನನ್ನ ಜೊತೆ ಯಾವ ಶಾಸಕರು ಇಲ್ಲ. ನನಗೆ ಯಾರ ಬೆಂಬಲವೂ ಬೇಡ. ನನ್ನ ಬಂಡೆ ಅಂತಾ ಕರೆದಿದ್ದೀರಾ. ಬಂಡೆಯನ್ನು ಆಕೃತಿಯಾಗಿ ಆದ್ರೂ ಮಾಡಿ ಇಲ್ಲ ವಿಧಾನಸಭೆಗೆ ಚಪ್ಪಡಿಯಾದ್ರೂ ಮಾಡಿಕೊಳ್ಳಿ ಅಂತಾ ಹೇಳಿದ್ದೆ. ಕಂಬವಾದ್ರೂ ಮಾಡಿ, ಮರಳುಗಂಬವಾದ್ರೂ ಮಾಡಿ. ನನ್ನ ಹತ್ರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೇನೆ. ವ್ಯಕ್ತಿ ಪೂಜೆಯಲ್ಲ ಎಂದರು.
ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗಲ್ಲ. ನನಗೆ ಯಾರ ಶಾಸಕರ ಬೆಂಬಲವು ಇಲ್ಲ. ನನಗೆ ರೆಸ್ಟ್ ಬೇಕು ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ.