ಬಿಜೆಪಿ ಸರ್ಕಾರದ ತಪ್ಪು ನಿರ್ಧಾರ, ಹಿರಿಯರ ಕಡೆಗಣನೆಯಿಂದ ಹಿನ್ನಡೆ: ಎಂ.ಪಿ ರೇಣುಕಾಚಾರ್ಯ | JANATA NEWS
ದಾವಣಗೆರೆ : ಬಿಜೆಪಿ ಸರ್ಕಾರದ ಕೆಲ ನಿರ್ಧಾರಗಳೇ ಬಿಜೆಪಿ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದು, ಸೋಲೇ ಗೆಲುವಿನ ಮೆಟ್ಟಿಲು. ಕಾಂಗ್ರೆಸ್ ಹಸಿಸುಳ್ಳು ಹೇಳಿ, ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಯಾವ ರೀತಿ ಸರ್ಕಾರ ನಡೆಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.
ನಮ್ಮ ಪ್ರಣಾಳಿಕ ಉತ್ತಮವಾಗಿದೆ. ಆದರೆ, ಪ್ರಣಾಳಿಕೆಯನ್ನ ತಡವಾಗಿ ಬಿಡುಗಡೆ ಮಾಡಲಾಯಿತು.ಕಾಂಗ್ರೇಸ್ ನವರು ಎರಡು ತಿಂಗಳು ಮುಂಚೆಯೇ ಪ್ರನಾಳಿಕೆ ಬಿಡುಗಡೆ ಮಾಡಿ, ಗ್ಯಾರಂಟಿಗಳನ್ನು ನೀಡಿದರು.
ಇದರಿಂದ ನಮಗೆ ಹಿನ್ನಡೆಯಾಯ್ತು ಜೊತೆಗೆ ಎನ್ ಪಿ ಎಸ್, ಓಪಿಎಸ್ ನೌಕರರಿಂದ ಹಿನ್ನೆಡೆಯಾಗಿದೆ. ಹಿರಿಯ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಿದ್ದರೆಂದು ತಪ್ಪು ಸಂದೇಶ ರವಾನಿಸಿ ಅದನ್ನು ಮತಗಳಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ನವರು ಹಸಿಸುಳ್ಳು ಹೇಳಿ, ಸುಳ್ಳು ಬರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಯಾವ ರೀತಿ ಸರ್ಕಾರ ನಡೆಸುತ್ತಾರೆ ಕಾದು ನೋಡ ಬೇಕು. ಸೋಲಿನ ಬಗ್ಗೆ ಯಾರನ್ನು ದೂಷಿಸುವುದಿಲ್ಲ, ಅವಳಿ ತಾಲೂಕಿನ ಜನರು 75 ಸಾವಿರ ಮತ ಹಾಕಿದ್ದು ನಾನು ಅವರಿಗೆ ಚಿರ ಋಣಿ.
ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿ ಗೆಡುವುದು ಬೇಡ, ಇದನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದ ರೇಣುಕಾಚಾರ್ಯ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.