ಜಮ್ಮು ಕಾಶ್ಮೀರ : 3 ಭಯೋತ್ಪಾದಕರೊಂದಿಗೆ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ವಶಕ್ಕೆ ಪಡೆದ ಸೇನೆ | JANATA NEWS
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಗಡಿ ಬೇಲಿ ಬಳಿ ಗುಂಡಿನ ಚಕಮಕಿಯ ನಂತರ ಮೂವರನ್ನು ಬಂಧಿಸುವ ಮೂಲಕ ಭಾರತೀಯ ಸೇನೆಯು ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಪ್ರಮುಖ ಪ್ರಯತ್ನವನ್ನು ಬುಧವಾರ ವಿಫಲಗೊಳಿಸಿದೆ.
ಮೂಲಗಳ ಪ್ರಕಾರ ಕರ್ಮರ್ಹಾ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್ಒಸಿ) ಮೂವರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನಾ ಪಡೆಗಳಿಂದ ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಒಬ್ಬ ಒಳನುಸುಳುವವನು ಗಾಯಗೊಂಡಿದ್ದ ಇಬ್ಬರನ್ನು ಜೀವಂತವಾಗಿ ಬಂಧಿಸಲಾಯಿತು. ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳ ಮದ್ದುಗುಂಡುಗಳ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದ್ದು, ಪೂಂಚ್ ಜಿಲ್ಲೆಯ ಖಾರಿ ಸೆಕ್ಟರ್ನಲ್ಲಿ ಭಾರಿ ಸಂಚು ವಿಫಲವಾಗಿದೆ.
ವರದಿಗಳ ಪ್ರಕಾರ, ಅಧಿಕಾರಿಗಳು ಬಂಧಿತ ಆರೋಪಿಗಳನ್ನು ಮೊಹಮ್ಮದ್ ಫಾರೂಕ್ (26) ಎಂದು ಗುರುತಿಸಿದ್ದಾರೆ, ಆತನ ಕಾಲಿಗೆ ಬುಲೆಟ್ ಗಾಯವಾಗಿದೆ, ಉಳಿದಿಬ್ಬರು ಮೊಹಮ್ಮದ್ ರಿಯಾಜ್ (23) ಮತ್ತು ಮೊಹಮ್ಮದ್ ಜುಬೈರ್ (22) ಎಂದು ಗುರುತಿಸಲಾಗಿದೆ. ಅವರು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳನ್ನು ಸ್ವೀಕರಿಸಿದ್ದಾರೆ ಎಂದು ನಂಬಲಾಗಿದೆ.