25 ಅಡಿ ಆಳದ ನಾಲೆಗೆ ಬಿದ್ದ ಕಾರು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಕುಟುಂಬ ಪಾರು | JANATA NEWS
ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಿಂದ ನೀರು ಹರಿಯುವ ನಾಲೆಗೆ ಕಾರು ಉರುಳಿ ಬಿದ್ದಿರುವ ಘಟನೆ ಮಾಚಹಳ್ಳಿ ಗ್ರಾಮದಲ್ಲಿ ನಡೆದಿದೆ..
ಕಾರಿನಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಪಾಂಡವಪುರ ಕಡೆ ತೆರಳುತ್ತಿದ್ದ ಕುಟುಂಬದ ಕಾರು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು 25 ಅಡಿ ಆಳದ ನಾಲೆಗೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಲೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಕಾರು ಮುಳುಗಿಲ್ಲ. ನಾಲೆಗೆ ಕಾರು ಬಿದ್ದ ತಕ್ಷಣ ಮಾಚಹಳ್ಳಿ ಗ್ರಾಮಸ್ಥರು ರಕ್ಷಣೆಗೆ ದಾವಿಸಿದ್ದಾರೆ. ತಕ್ಷಣವೇ ವಿಸಿ ನಾಲೆಗೆ ಇಳಿದು ಕಾರಿನೊಳಗೆ ಸಿಲುಕಿದ್ದ ಗಂಡ, ಹೆಂಡತಿ ಮಕ್ಕಳನ್ನ ರಕ್ಷಣೆ ಮಾಡಿ ಕಾರಿನಿಂದ ಹೊರಗೆ ಎಳೆದುಕೊಂಡಿದ್ದಾರೆ. ಆದ್ದರಿಂದ, ಕುಟುಂಬದ ಎಲ್ಲ ಸದಸ್ಯರೂ ಪ್ರಣಾಪಾಯದಿಂದ ಪಾರಾಗಿದ್ದಾರೆ. ನಂತರ ಕಾರಿನಲ್ಲಿದ್ದ ನಾಲ್ಕು ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.