ಈಗಲೇ ಬರೆದಿಟ್ಟುಕೊಳ್ಳಿ ಪೆಟ್ರೋಲ್, ಡೀಸೆಲ್, ಕುಡಿಯುವ ನೀರಿನ ದರ, ಬಿಬಿಎಂಪಿ ಟ್ಯಾಕ್ಸ್ ಹೆಚ್ಚಳವಾಗುತ್ತೆ | JANATA NEWS
ಬೆಂಗಳೂರು : ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಎದ್ದು ಬಿಡುತ್ತದೆ. ಈಗಲೇ ಬರೆದಿಟ್ಟುಕೊಳ್ಳಿ ಪೆಟ್ರೋಲ್, ಡೀಸೆಲ್, ಕುಡಿಯುವ ನೀರಿನ ದರ, ಬಿಬಿಎಂಪಿ ಟ್ಯಾಕ್ಸ್ ಇವೆಲ್ಲಾ ದರ ಹೆಚ್ಚಳವಾಗುತ್ತೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಎದ್ದು ಬಿಡುತ್ತದೆ. ಆ ಮೇಲೆ ಕೇಂದ್ರ ಸರ್ಕಾರವೇ ಕಾರಣ ಅಂತಾರೆ! ಎಂಪಿ ಎಲೆಕ್ಸನ್ ವರೆಗೂ ಅಷ್ಟೇ ಇವರ ಕಥೆ. ಆ ಮೇಲೆ 50 ಸಾವಿರ ಕೋಟಿ ಸಾಲ ಮಾಡಿ ಹೋಗ್ತಾರೆ. ನಿಮಗೆ ಜ್ಞಾನ ಇರಲಿಲ್ಲವಾ?
ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಾವು ಕೊಡುತ್ತಿದ್ದೇವು ಅಂತಾ ಹೇಳಬೇಕಿತ್ತು. ವಿದ್ಯುತ್ ದರ ಹೆಚ್ಚಳಕ್ಕೆ ನಮ್ಮ ಪಕ್ಷ ಒಪ್ಪಿಕೊಂಡಿರಲಿಲ್ಲ. ಈಗ ವಿದ್ಯುತ್ ದರ ಏರಿಕೆ ಮಾಡಿರೋದು ನೀವು, ನಾವಲ್ಲ. ಪೆಟ್ರೋಲ್, ಡೀಸೆಲ್ ಏರಿಕೆ ಗ್ಯಾರಂಟಿ, ಕುಡಿಯುವ ನೀರಿನ ದರ ಏರಿಕೆ ಗ್ಯಾರಂಟಿ. ಬಿಬಿಎಂಪಿ ಟ್ಯಾಕ್ಸ್ ಏರಿಕೆ ಗ್ಯಾರಂಟಿ ಫಿಕ್ಸ್. ಈಗ ಉಚಿತ ಬಸ್ಸು ಪ್ರಯಾಣ ಅಂತಾರೆ, ಆ ಮೇಲೆ ಅದರ ಡಬಲ್ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಆಕ್ಷೇಪಿಸಿ ಗೌರವಾನ್ವಿತ ರಾಜ್ಯಪಾಲರಿಗೆ ಬುಧವಾರ ದೂರು ನೀಡಿದ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು, ಮಹಾನಗರಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಕಾಂಗ್ರೆಸ್ ಪಕ್ಷದವರು, ಸಚಿವರಾದ ಡಿ.ಕೆ.ಶಿವಕುಮಾರ್, ಜಾರ್ಜ್, ಜಮೀರ್ ಮತ್ತಿತರರು ಹೊರಟಿದ್ದಾರೆ.
ನಮ್ಮ ಸಂಸದರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ತೇಜಸ್ವಿ ಸೂರ್ಯ ಅವರನ್ನು ಕರೆಯದೆ ಯಾವುದೋ ರಾಜ್ಯದಿಂದ ಚುನಾಯಿತರಾದ ಸುರ್ಜೇವಾಲರನ್ನು ಕರೆದು ಸಭೆ ನಡೆಸಿದ್ದಾರೆ. ವಾರ್ಡ್ ವಿಂಗಡಣೆ, ಅಭಿವೃದ್ಧಿ, ಚುನಾವಣೆ, ಮೀಸಲಾತಿ, ವಾರ್ಡ್ಗಳಿಗೆ ಅನುದಾನ ಮತ್ತಿತರ ವಿಚಾರಗಳ ಕುರಿತು ಅವರು ಚರ್ಚಿಸುವುದಾದರೆ ಯಾಕೆ ಮತದಾನ ಬೇಕು? ಯಾಕೆ ಚುನಾಯಿತ ಪ್ರತಿನಿಧಿಗಳು ಬೇಕು? ಎಂದು ಪ್ರಶ್ನಿಸಿದರು.