ಈಗ 5ಕೆಜಿ ಉಚಿತವಾಗಿ ಕೊಡುತ್ತಿರುವುದು ಮೋದಿ, ಭರವಸೆಯಂತೆ ಹೆಚ್ಚುವರಿ 10ಕೆಜಿ ರಾಜ್ಯ ಸರ್ಕಾರ ತಂದು ಕೊಡಬೇಕು - ಬಿಎಸ್ ವೈ | JANATA NEWS
ಬೆಂಗಳೂರು : ಯಾವುದೇ ಸಂದರ್ಭದಲ್ಲಿ ಸಹ ಮೋದಿಯವರು ನಾವು ಹೆಚ್ಚುವರಿ ಅಕ್ಕಿ ಕೊಡುತ್ತೇನೆ ಎಂದು ಹೇಳಿರಲಿಲ್ಲ. ಈಗ ಕೊಡುತ್ತಿರುವ 5ಕೆಜಿ ಉಚಿತವಾಗಿ ಕೊಡುತ್ತಿರುವುದು ಮೋದಿ ಅವರು. ಸಿದ್ದರಾಮಯ್ಯ ನವರು, ಶಿವಕುಮಾರ್ ಅವರು ಗೊಂದಲವನ್ನು ಮಾಡದೇ ಅಕ್ಕಿಯನ್ನು ಎಲ್ಲಿಂದಾದರೂ ತರಲಿ ಒಟ್ನಲ್ಲಿ ಅವರು ಭರವಸೆ ಕೊಟ್ಟ ಮೇಲೆ 10ಕೆಜಿಯನ್ನು ಅವರು ಕೊಡ್ಲೇಬೇಕು, ಎಂದು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ಒತ್ತಾಯಿಸಿದ್ದಾರೆ. ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದವರುದ್ದೇಶಪೂರ್ವಕವಾಗಿ ಗೊಂದಲವನ್ನು ಉಂಟು ಮಾಡುವಂತ ಪ್ರಯತ್ನ ಮಾಡುತ್ತಿದ್ದಾರೆ ಈಗಾಗಲೇ ಕೇಂದ್ರ ಸರ್ಕಾರ ನರೇಂದ್ರ ಮೋದಿಯವರು ಉಚಿತವಾಗಿ 5 ಕೆಜಿ ಅಕ್ಕಿಯನ್ನು ಕೊಡುತ್ತಿದ್ದಾರೆ. ಹೆಚ್ಚುವರಿ ಅಕ್ಕಿ ಕೊಡುವುದಕ್ಕೆ ಕೇಂದ್ರವೇನು ಒಪ್ಪಿರಲಿಲ್ಲ, ಅದು ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಾದ್ರೂ ಖರೀದಿ ಮಾಡಿ, ಮತ್ತೊಂದು ಮಾಡಿ, ಹೆಚ್ಚುವರಿ 10 ಕೆಜಿ ಕೊಡುವ ಬಗ್ಗೆ ಏನು ಭರವಸೆ ಮಾಡಿದ್ದಾರೆ ಅದನ್ನು ಈಡೇರಿಸಲೇಬೇಕು. ಯಾವುದೇ ಕಾರಣಕ್ಕೂ 1ಗ್ರಾಂ ಕಡಿಮೆಯಾದರೂ ಸಹ ಜನ ಒಪ್ಪೋದಿಲ್ಲ ಅದರಿಂದ ಅವರೇನು ಭರವಸೆ ನೀಡಿದ್ದಾರೆ ಅದನ್ನು ನಾವು ಒತ್ತಾಯಿಸುತ್ತೇನೆ., ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದು ಸರಿಯಲ್ಲ. ಯಾವುದೇ ಸಂದರ್ಭದಲ್ಲಿ ಸಹ ಮೋದಿಯವರು ನಾವು ಹೆಚ್ಚುವರಿ ಅಕ್ಕಿ ಕೊಡುತ್ತೇನೆ ಎಂದು ಹೇಳಿರಲಿಲ್ಲ. ಈಗ ಕೊಡುತ್ತಿರುವ 5 ಕೆಜಿ ಉಚಿತವಾಗಿ ಕೊಡುತ್ತಿರುವುದು, ಮೋದಿ ಅವರು ಕೊಡುತ್ತಿರುವುದು. ಹಾಗಾಗಿ ಈಗಲಾದರೂ ಸಿದ್ದರಾಮಯ್ಯ ನವರು, ಶಿವಕುಮಾರ್ ಅವರು ಗೊಂದಲವನ್ನು ಮಾಡದೇ ಅಕ್ಕಿಯನ್ನು ಎಲ್ಲಿಂದಾದರೂ ತರಲಿ ಒಟ್ನಲ್ಲಿ ಅವರು ಭರವಸೆ ಕೊಟ್ಟ ಮೇಲೆ 10ಕೆಜಿಯನ್ನು ಅವರು ಕೊಡ್ಲೇಬೇಕು. ಆ ಒತ್ತಾಯವನ್ನು ನಾನು ಮಾಡುತ್ತೇನೆ. ಅದು ಅವರ ಜವಾಬ್ದಾರಿ. ಅದನ್ನು ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ, ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ