ಪೊಲೀಸ್ ಇಲಾಖೆಗೆ ಸರ್ಜರಿ: ಸಂದೀಪ್ ಪಾಟೀಲ್, ರಮಣ್ ಗುಪ್ತ ಸೇರಿ 15 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ | JANATA NEWS
ಬೆಂಗಳೂರು : ಕಾಂಗ್ರೆಸ್ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಲಾಗಿದ್ದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಕೆಎಸ್ಆರ್ಪಿ ಐಜಿಪಿಯಾಗಿ ನೇಮಿಸಿದೆ. ಇವರಿಂದ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
1. ರಾಮಚಂದ್ರ ರಾವ್ (ಪೊಲೀಸ್ ಗೃಹ ನಿರ್ಮಾಣ ನಿಗಮದ ಎಡಿಜಿಪಿ)
2. ಮಾಲಿನಿ ಕೃಷ್ಣಮೂರ್ತಿ (ಬಂಧಿಖಾನೆ ಎಡಿಜಿಪಿ)
3. ಅರುಣ್ ಚಕ್ರವರ್ತಿ (ಡಿಸಿಆರ್ಇ, ಎಡಿಜಿಪಿ)
4. ಮನೀಷ್ ಕರ್ಬಿಕರ್ (ಸಿಐಡಿ, ಎಡಿಜಿಪಿ)
5. ಚಂದ್ರಶೇಖರ್ (ಐಎಸ್ಡಿ, ಎಡಿಜಿಪಿ)
6. ವಿಪುಲ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪೂರ್ವ ವಲಯ)
7. ಪ್ರವೀಣ್ ಮಧುಕರ್ ಪವಾರ್ (ಐಜಿಪಿ, ಸಿಐಡಿ)
8. ಸತೀಶ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪಶ್ಚಿಮ ವಲಯ)
9. ಸಂದೀಪ್ ಪಾಟಿಲ್ (ಕೆಎಸ್ಆರ್ಪಿ, ಐಜಿಪಿ)
10. ವಿಕಾಸ್ ಕುಮಾರ್ ವಿಕಾಸ್ (ಐಎಎಸ್ಡಿ, ಐಜಿಪಿ)
11. ರಮಣ್ ಗುಪ್ತಾ (ಬೆಳಗಾವಿ ವಲಯ ಐಜಿಪಿ)
12. ಸಿದ್ದರಾಮಪ್ಪ (ಕೇಂದ್ರ ಕಚೇರಿ ಐಜಿಪಿ)
13. ಬೋರಲಿಂಗಯ್ಯ (ಮೈಸೂರು ವಲಯ ಡಿಐಜಿ)
14. ವಂಶಿಕೃಷ್ಣ (ಡಿಐಜಿ, ಸಿಐಡಿ)
15. ರಿಷ್ಯಂತ್ (ದಕ್ಷಿಣ ಕನ್ನಡ ಎಸ್ಪಿ) ಆಗಿ ವರ್ಗಾವಣೆ ಮಾಡಲಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರರಾಗಿ ಕೆ ಟಿ ನಾಗರಾಜ್ ನೇಮಕಗೊಂಡಿದ್ದಾರೆ.