ನಮಗೆ ಒಂದೇ ಹೆಂಡತಿ, ಆದರೆ ಮುಸ್ಲಿಮರಿಗೆ 5 ಹೆಂಡತಿಯರು ಇರುತ್ತಾರೆ! | JANATA NEWS
ಕೊಪ್ಪಳ : ನಮಗೆ ಒಂದೇ ಹೆಂಡತಿ, ಆದರೆ ಮುಸ್ಲಿಮರಿಗೆ 5 ಹೆಂಡತಿಯರು ಇರುತ್ತಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಡಿಕೆ ಶಿವಕುಮಾರ್. ಇನ್ನೂ ಒಂದು ತಿಂಗಳು ಅವಕಾಶ ನೀಡುತ್ತೇವೆ. ಜುಲೈ 4 ರೊಳಗಾಗಿ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ವಿಧಾನಸಭೆ ಒಳಗೂ ಹಾಗೂ ಹೊರಗೂ ಬಿಡುವುದಿಲ್ಲ. ಹುಲಿಗೆಮ್ಮನ ಮೇಲೆ ಆಣೆ ಮಾಡಿ ಹೇಳುತ್ತೇನೆ. ಮುಂದೆ ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಈ ಸರಕಾರ ಐದು ವರ್ಷವಿರುವುದಿಲ್ಲ. ಈಗಾಗಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ರೇಸ್ ನಡೆದಿದೆ. ಚುನಾವಣೆಯಲ್ಲಿನ ಸೋಲಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕೇವಲ ಇಬ್ಬರು ಗೆದ್ದಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಇಬ್ಬರು ಗೆದ್ದಿರುವಾಗ ಎದೆ ಗುಂದಿಲ್ಲ. ಯಾವುದೋ ಚುನಾವಣೆಯಲ್ಲಿ ಸೋತಾಗ ಹೆದರುತ್ತೇವೇನು ಎಂದರು.
ಇನ್ನು, ನಾವು ಯಾವುದೋ ಗ್ಯಾರಂಟಿ ತೋರಿಸಿ ಗೆದ್ದಿಲ್ಲ ಎಂದ ಈಶ್ವರಪ್ಪ, ಕಾಂಗ್ರೆಸ್ಸಿನವರು ಅಧಿಕಾರ ಬಂದಿದೆ ಎಂದು ಕುಣಿಯಬಹುದು. ಆದರೆ ಜನ ಲೋಕಸಭೆಯಲ್ಲಿ ಸೋಲಿಸಲು ಸೆಡ್ಡು ಹೊಡೆದು ತಯಾರಿಯಾಗಿದ್ದಾರೆ. ಸೋಲಿನಲ್ಲಿ ಧೃತಿಗೆಡುವ ಹೇಡಿಗಳಲ್ಲ. ಸೈನಿಕರಿಗೆ ಶಸ್ತ್ರಗಳನ್ನು ಕೊಟ್ಟು ಅವರು ನಮ್ಮ ಒಬ್ಬ ಸೈನಿಕರನ್ನು ಹೊಡೆದರೆ, ನೀವು ಹತ್ತು ಜನರನ್ನು ಹೊಡೆಯಿರಿ ಎಂದಿದ್ದಾರೆ. ಹೀಗಾಗಿ ಪಾಕಿಸ್ತಾನದವರು ಭಾರತದತ್ತ ತಲೆಹಾಕಿ ಮಲಗಿಕೊಳ್ಳುವುದಿಲ್ಲ. ನಿರುದ್ಯೋಗಿ ಯುವಕರಿಗೆ 3000, ಮಹಿಳೆಯರಿಗೆ 2000 ರೂಪಾಯಿ ಎಂಬ ಸುಳ್ಳು ಹೇಳಿಲ್ಲ ಎಂದರು.